ಸೌಹಾರ್ದ ಸಮಾಜವನ್ನು ಕಟ್ಟಲು ಪರಸ್ಪರರು ಬೆರೆತು, ಅರಿಯಬೇಕಾದ ಈ ಅನಿವಾರ್ಯ ಸನ್ನಿವೇಶದಲ್ಲಿ, ಬಹಿರಂಗ ಸಭೆಯ ಅಧ್ಯಕ್ಷತೆಯನ್ನು ಸ್ವಾಮೀಜಿಯೊಬ್ಬರು ವಹಿಸುತ್ತಿರುವುದು ಸ್ತುತ್ಯರ್ಹ. ಬೆಳಕಿನ ಕಿರಣಗಳು ಯಾವ ಕಡೆಯಿಂದ ಬಂದರೂ ಸ್ವಾಗತಾರ್ಹ ಎಂಬಂತೆ ಉತ್ತಮ ಆಲೋಚನೆಗಳು, ಬದಲಾವಣೆಗಳು ಯಾರಿಂದಲೇ ಉಂಟಾದರೂ ಸ್ವಾಗತಿಸಬೇಕಲ್ಲವೇ?