ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗೆಯ ಪುತ್ರ!

Last Updated 12 ಅಕ್ಟೋಬರ್ 2018, 20:15 IST
ಅಕ್ಷರ ಗಾತ್ರ

ಗಂಗಾ ನದಿಯ ಸ್ವಚ್ಛತೆಗಾಗಿ ಆಗ್ರಹಿಸಿ ಜೂನ್ 22ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಜಿ.ಡಿ. ಅಗರ್ವಾಲ್‌ ಅವರು ನಿಧನರಾದ ಸುದ್ದಿ ಓದಿ ತುಂಬ ಬೇಸರವಾಯಿತು.

ಸ್ವಚ್ಛ ಭಾರತ ಅಭಿಯಾನಕ್ಕಾಗಿ ಪೊರಕೆ ಹಿಡಿದು ಪ್ರದರ್ಶನ ನೀಡುವ, ‘ಚಾಂಪಿಯನ್ ಆಫ್‌ ದ ಅರ್ಥ್‌’ ಪ್ರಶಸ್ತಿಯನ್ನು ಹೆಮ್ಮೆಯಿಂದ ಸ್ವೀಕರಿಸುವ ಮತ್ತು 2014ರ ಚುನಾವಣೆಯ ಸಂದರ್ಭದಲ್ಲಿ ‘ಗಂಗಾ ಮಾತೆ ನನ್ನನ್ನು ಬರಮಾಡಿಕೊಂಡಿದ್ದಾಳೆ’ ಎಂದು ಭಾಷಣ ಬಿಗಿದಿದ್ದ ಪ್ರಧಾನಿ ಮೋದಿಯವರು, 110 ದಿನಗಳಿಂದ ನಿರಂತರ ಉಪವಾಸ ಮಾಡುತ್ತಿದ್ದ 86 ವರ್ಷದ ವಯೋವೃದ್ಧರನ್ನು ಯಾಕೆ ಸಂತೈಸಲಿಲ್ಲ?

‘ಗಂಗಾ ನದಿಯ ಸ್ವಚ್ಛತೆಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ, ಉಪವಾಸ ಸತ್ಯಾಗ್ರಹದಿಂದ ಹಿಂದೆ ಸರಿಯಿರಿ’ ಎಂದು ಅಗರ್ವಾಲ್‌ ಅವರ ಮನವೊಲಿಸುವುದು ಪ್ರಧಾನಿಗೆ ಕಷ್ಟವಾಗಿತ್ತೇ?

ಆನಂದ ರಾಮತೀರ್ಥ, ಜಮಖಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT