ಈ ಸಮಿತಿಯಲ್ಲಿ ಗ್ರಾಮೀಣ, ಆದಿವಾಸಿ, ಕೊಳೆಗೇರಿಯ ಪರಿಸರದಲ್ಲಿ ಶಿಕ್ಷಣಕ್ಕಾಗಿ ಕೆಲಸ ಮಾಡಿದ ಸದಸ್ಯರೇ ಇರಲಿಲ್ಲ. ಹಾಗಾಗಿಯೇ ಆನ್ಲೈನ್ ಶಿಕ್ಷಣಕ್ಕೆ ಬೆನ್ನುತಟ್ಟಿ ನಿಲ್ಲಲಾಗಿದೆ. ಇಂತಹ ವ್ಯವಸ್ಥೆಯು ನಗರ ಮಟ್ಟಕ್ಕೆ ಸೀಮಿತವೇ ಹೊರತು, ಹಿಂದುಳಿದ ಪರಿಸರದ ಬಡ ಜನರಿಗೆ ಸಲ್ಲುವುದಿಲ್ಲ. ಇದರಿಂದಾಗಿ ಸಮಾನತೆಯ ವಿಚಾರವನ್ನು ಗಾಳಿಗೆ ತೂರಿದಂತಾಗುತ್ತದೆ. ಸಮ ಸಮಾಜದ ಸಮನ್ವಯವನ್ನು ಕಾಯುವ ಶಿಕ್ಷಣವು ಮೂಲಭೂತ ಹಕ್ಕಾಗಿರುವ ಸಂದರ್ಭದಲ್ಲಿ, ಬಹಳಷ್ಟು ಗ್ರಾಮೀಣ ಮಕ್ಕಳನ್ನು ಹಾಗೂ ನಗರದ ಬಡವರನ್ನು ಆನ್ಲೈನ್ ಶಿಕ್ಷಣವು ಹೊರಗಿಡುತ್ತದೆ.