ಕೋವಿಡ್ ರೋಗವು ಹಿರಿಯ ನಾಗರಿಕರಿಗೆ ಇತರರಿಗಿಂತ ಹೆಚ್ಚು ಸವಾಲನ್ನು ಒಡ್ಡಿರುವ ಕುರಿತು ಟಿ.ಎನ್.ವಾಸುದೇವಮೂರ್ತಿ ಅವರು ಬರೆದಿರುವ ಲೇಖನ (ಪ್ರ.ವಾ., ನ. 28) ಅರ್ಥಪೂರ್ಣವಾಗಿದೆ. ಹಿಂದೆ ಅವಿಭಕ್ತ ಕುಟುಂಬಗಳಲ್ಲಿ ಹಿರಿಯರ ಮಾರ್ಗದರ್ಶನದಡಿ ಬಾಳಿ–ಬದುಕಿದ ಪೀಳಿಗೆಯು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನವನ್ನು ರೂಪಿಸಿಕೊಳ್ಳುತ್ತಿತ್ತು. ಆದರೆ ಇಂದು ವಿಘಟನೆಗೊಂಡಿರುವ ಕುಟುಂಬದ ಸದಸ್ಯರು ಹಿರಿಯರ ಮಾರ್ಗದರ್ಶನ ಇಲ್ಲದೆ, ಮಾನಸಿಕ ವೇದನೆಯಿಂದ ತೊಳಲಾಡಿ ಬದುಕನ್ನು ಜೀವಿತಾವಧಿಯ ಮಧ್ಯದಲ್ಲಿಯೇ ಕೊನೆಗೊಳಿಸಿಕೊಳ್ಳುತ್ತಿರುವ ನಿದರ್ಶನಗಳು ನಮ್ಮೆದುರಿಗೆ ಇವೆ.