ಮಠ, ದೇಗುಲಗಳಿಗೆ ಕೆಲ ವರ್ಷಗಳ ಹಿಂದೆ ಶುರುವಿಟ್ಟ ಅನುದಾನ ನೀಡುವ ಪದ್ಧತಿ, ರಾಜ್ಯದ ಈಗಿನ ವಿಷಮ ಪರಿಸ್ಥಿತಿಯಲ್ಲಿಯೂ ಮುಂದು ವರಿಯುತ್ತಿರುವುದು (ಪ್ರ.ವಾ., ಮಾರ್ಚ್ 18) ಮೆಚ್ಚುಗೆಯ ನಡೆಯಲ್ಲ. ಯಾವ ಮಠ, ಮಂದಿರವೂ ಇಂದು ಬಡವಾಗಿಲ್ಲ. ಸಮುದಾಯ, ಸಾರ್ವಜನಿಕರ ದೇಣಿಗೆಗಳಿಂದ, ಭಕ್ತರ ಕೊಡುಗೆಗಳಿಂದ ಅವು ಸುಸ್ಥಿತಿ ಯಲ್ಲಿವೆ. ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಮಠ, ಮಂದಿರಗಳು ಎಂದೂ ಹಣದ ಅಡಚಣೆಯನ್ನು ಎದುರಿಸಿದಂತಹ ಉದಾಹರಣೆ ಇಲ್ಲ. ದೇಗುಲಗಳ ಪುನರುಜ್ಜೀವನ ಕಾರ್ಯವು ಹಣದ ತೊಂದರೆಯಿಲ್ಲದೆ ಎಲ್ಲೆಡೆ ಸಾಂಗವಾಗಿ ಸಾಗುತ್ತಿದೆ.