ರಾಜ್ಯ ಸರ್ಕಾರಗಳ ಕೃಷಿ ಸಾಲ ಮನ್ನಾ ನಿರ್ಧಾರದಿಂದಾಗಿ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತಿವೆ ಎಂದು ಆರ್.ಬಿ.ಐ. ಎಚ್ಚರಿಕೆ ನೀಡಿದೆ (ಪ್ರ.ವಾ., ಡಿ. 31). ಇತ್ತೀಚೆಗೆ ಎಲ್ಲಾ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ, ತಾವು ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿಕೊಳ್ಳುವುದನ್ನು ರೂಢಿಯಾಗಿಸಿಕೊಂಡಂತೆ ಕಾಣುತ್ತಿದೆ. ಸಾಲ ಮನ್ನಾ ಮಾಡಿದ ನಂತರ, ಆ ಪಕ್ಷದ ಸಚಿವರು, ಶಾಸಕರು ತಮ್ಮ ಸ್ವಂತ ಹಣದಿಂದ ಸಾಲ ಮನ್ನಾ ಮಾಡಿರುವ ರೀತಿಯಲ್ಲಿ ಹೇಳಿಕೆಗಳನ್ನು ಕೊಡುತ್ತಾರೆ.