ಇದರಂತೆ ನಮ್ಮ ಮಂತ್ರಿಗಳು ಹೇಗೆ ಕೇಂದ್ರ ಮಂತ್ರಿಗಳು ಸಂಸತ್ತಿನ ಸದಸ್ಯರಾಗಿರುತ್ತಾರೆಯೋ ಹಾಗೆಯೇ ರಾಜ್ಯ ಶಾಸಕಾಂಗಗಳ ಉಭಯ ಸದನಗಳಾದ ವಿಧಾನಸಭೆ ಅಥವಾ ವಿಧಾನಪರಿಷತ್ತಿನ ಸದಸ್ಯರಾಗಬೇಕಾಗುತ್ತದೆ ಮತ್ತು ರಾಜ್ಯ ಮಂತ್ರಿಮಂಡಲ ಹೀಗೆಯೇ ಇರಬೇಕು ಎಂಬುದನ್ನು ಭಾರತದ ಸಂವಿಧಾನದ ವಿಧಿ 164 ಬಹಳ ಸ್ಪಷ್ಟವಾಗಿ ದಾಖಲಿಸಿದೆ. ಅಂದಹಾಗೆ ರಾಜಕೀಯ ಪಕ್ಷಗಳ ಅಡಿಯಲ್ಲಿ ಸ್ಪರ್ಧಿಸಿ, ವಯಸ್ಕ ಮತದಾನದ ಮೂಲಕ ಸದರಿ ಸಚಿವರು ಆಯ್ಕೆಯಾಗುವುದರಿಂದ, ನಮ್ಮ ಸಂಪುಟವು ರಾಜಕೀಯ ಸಂಪುಟವೇ ಆಗುತ್ತದೆ. ಹಾಗಿದ್ದರೆ ಯಾಕೆ ಮಂತ್ರಿಗಳು ಸದನದಿಂದ ಆಯ್ಕೆಯಾಗಬೇಕು? ಇದಕ್ಕೆ ಡಾ. ಅಂಬೇಡ್ಕರ್ ಅವರು ಹೇಳಿರುವುದೇನೆಂದರೆ ‘ಅವರು ಜನರಿಗೆ ಹೆಚ್ಚು ಜವಾಬ್ದಾರರಾಗಿರುತ್ತಾರೆ ಅಥವಾ ಜವಾಬ್ದಾರರಾಗಿರಬೇಕು’ ಎಂಬುದು. ಈ ಹಿನ್ನೆಲೆಯಲ್ಲಿ, ರಾಜಕೀಯೇತರ ಸಂಪುಟವು ಸಂವಿಧಾನವಿರೋಧಿ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕಾಗುತ್ತದೆ.