ಈರುಳ್ಳಿ ದರ ಭಾರಿ ಪ್ರಮಾಣದಲ್ಲಿ ಏರಿದ್ದು, ಬಹುಜನರ ಪ್ರೀತಿಯ ಆಹಾರಪದಾರ್ಥವು ಗಗನಕುಸುಮವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ‘ನಾನು ಈರುಳ್ಳಿ ತಿನ್ನುವುದಿಲ್ಲ. ಈರುಳ್ಳಿ, ಬೆಳ್ಳುಳ್ಳಿ ಬಳಸದ ಕುಟುಂಬದಿಂದ ಬಂದಿದ್ದೇನೆ’ ಎಂದಿರುವುದು ಬೇಜವಾಬ್ದಾರಿಯ ಹೇಳಿಕೆಯಾಗಿದೆ. ಈರುಳ್ಳಿ–ಬೆಳ್ಳುಳ್ಳಿ ರುಚಿಕರವಷ್ಟೇ ಅಲ್ಲ, ಹೆಚ್ಚಿನ ಔಷಧೀಯ ಗುಣಗಳಿಂದ ಕೂಡಿವೆ. ಹೀಗಾಗಿ, ಆಯುರ್ವೇದದಲ್ಲಿ ಮಹತ್ವ ಪಡೆದಿರುವ ಆಹಾರ ಪದಾರ್ಥಗಳೂ ಆಗಿವೆ. ತಪ್ಪು ಗ್ರಹಿಕೆಯಿಂದಲೋ ಅಜ್ಞಾನದಿಂದಲೋ ಒಂದು ಸಮುದಾಯ ಎಷ್ಟೋ ವರ್ಷಗಳಿಂದ ಇವುಗಳನ್ನು ತಿನ್ನುವುದರ ಮೇಲೆ ಸ್ವಯಂ ನಿರ್ಬಂಧ ಹೇರಿಕೊಂಡಿದೆ. ಆದರೆ ಈ ಸಮುದಾಯದಲ್ಲೂ ಬಹಳಷ್ಟು ಮಂದಿ ಬದಲಾವಣೆಗೆ ತೆರೆದುಕೊಂಡಿರುವುದೂ ಉಂಟು.