ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ರೈತರ ಕುರಿತು ಕಾಳಜಿ ಇರಲಿ

Last Updated 10 ಡಿಸೆಂಬರ್ 2019, 20:30 IST
ಅಕ್ಷರ ಗಾತ್ರ

ಈರುಳ್ಳಿ ಬೆಲೆ ದುಬಾರಿಯಾದರೆ ಗ್ರಾಹಕನಿಗೆ ತುಸು ಹೊರೆಯಾಗುತ್ತದೆ. ಆದರೆ, ಅದು ಇಲ್ಲದೆಯೂ ಅಡುಗೆ ಮಾಡಲು ಸಾಧ್ಯ. ಅದೊಂದು ಐಚ್ಛಿಕ ಆಹಾರ ಪದಾರ್ಥವೇ ಹೊರತು ಅನಿವಾರ್ಯವಲ್ಲ. ಆದರೆ ಈರುಳ್ಳಿ ಬೆಳೆದ ರೈತನಿಗೆ ಆ ಸಮಯದಲ್ಲಿ ಈರುಳ್ಳಿಯೊಂದೇ ಆದಾಯದ ಮೂಲವಾಗಿರುತ್ತದೆ. ಸೂಕ್ತ ಬೆಲೆ ಸಿಗಲಿಲ್ಲವೆಂಬ ಕಾರಣಕ್ಕೆ ರೈತರು ಆತ್ಮಹತ್ಯೆಗೆ ಶರಣಾದ ನಿದರ್ಶನಗಳು ಇವೆ. ಆದರೆ, ಈರುಳ್ಳಿ ಕೊಳ್ಳಲಾಗಲಿಲ್ಲವೆಂದು ಯಾವ ಗ್ರಾಹಕನೂ ಆತ್ಮಹತ್ಯೆ ಮಾಡಿಕೊಂಡ ನಿದರ್ಶನ ಇಲ್ಲ. ದರ ಏರಿಕೆಯನ್ನು ಮಾಧ್ಯಮಗಳು ಏನೋ ಆಗಿಹೋಯಿತು ಎಂಬಂತೆ ಬಿಂಬಿಸುವ ಬದಲು, ರೈತಮುಖಿಯಾಗಿ ಅರೆಕ್ಷಣ ಯೋಚಿಸಬೇಕು.ಗ್ರಾಹಕರ ಪರವಾಗಿ ಅನುಕಂಪ ತೋರಿಸಿ. ಜೊತೆಗೆ ರೈತನ ಸ್ಥಿತಿಗತಿ ಬಗ್ಗೆಯೂ ಚಿಂತಿಸಿ.

ಸೋಮಲಿಂಗಪ್ಪ, ಬೆಣ್ಣಿಗುಳದಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT