ಸೂಕ್ತ ಮೂಲ ಸೌಕರ್ಯಗಳನ್ನು ಒದಗಿಸದೆ, ಗ್ರಾಮಗಳಿಗೆ ಶಸ್ತ್ರಚಿಕಿತ್ಸಾ ತಜ್ಞರು ಹೋಗುವುದಿಲ್ಲ, ಅದಕ್ಕೇ ಆಯುರ್ವೇದ ವೈದ್ಯರನ್ನು ಸಜ್ಜುಗೊಳಿಸುತ್ತೇವೆ ಎನ್ನುವುದು ಒಪ್ಪತಕ್ಕ ಮಾತೇ? ಅವರಾದರೂ ಅಲ್ಲಿ ಹೇಗೆ ನಿಭಾಯಿಸಬೇಕು? ಅಲ್ಲಿಯ ರೋಗಿಗಳ ಗತಿ ಏನಾಗಬೇಕು? ಅಥವಾ ಇದರ ಹಿಂದೆ, ಆಯುರ್ವೇದ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ಹೊಸ ವಿಭಾಗಗಳು, ಹೊಸ ಕಾಲೇಜುಗಳನ್ನು ತೆರೆಯಲು ಯಾರಿಗಾದರೂ ಅನುವು ಮಾಡಿಕೊಡುವ ಹುನ್ನಾರವಿದೆಯೇ? ಈ ಕುರಿತು ಎರಡೂ ವಿಭಾಗದವರು ಪರಸ್ಪರರನ್ನು ವೈರಿಗಳಂತೆ ಪರಿಗಣಿಸದೆ, ತಮ್ಮ ಧ್ಯೇಯವು ರೋಗಿಗಳ ಸೇವೆಯೇ ಎಂಬುದನ್ನು ಮನಗಂಡು, ಈ ವಿಷಯವನ್ನು ಸೌಹಾರ್ದದಿಂದ ಬಗೆಹರಿಸಿಕೊಳ್ಳುವುದು ಒಳಿತು.
-ಡಾ. ಸುಧಾ ಕೆ.,ಬೆಂಗಳೂರು