ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಸಂಚರಿಸಲಿರುವ ಮಾರ್ಗಗಳಲ್ಲಿ ತಾತ್ಕಾಲಿಕವಾಗಿ ರಸ್ತೆಗುಂಡಿಗಳನ್ನು ಮುಚ್ಚಿ, ಅಬ್ಬಾ ಎಂಥ ಅದ್ಭುತ ರಸ್ತೆಗಳಿವೆ ಎನಿಸುವಂತೆ ಮಾಡಲು ಯತ್ನಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಅದೂ ಆ ರಸ್ತೆಗಳು ಕೇವಲ ವಾರಕ್ಕೋ ಹದಿನೈದು ದಿನಗಳಿಗೋ ಹಾಳಾಗುವಂತಹ ಗುಣಮಟ್ಟ ದಲ್ಲಿ ಕೆಲಸ ಮಾಡಿ, ಜನಸಾಮಾನ್ಯರ ತೆರಿಗೆ ಹಣವನ್ನು ಪೋಲು ಮಾಡುವುದು ಯಾವ ನ್ಯಾಯ?