‘ನೆಟ್ಟಗೆ ಭಾಷಣ ಮಾಡೋದನ್ನು ಕಲಿತುಕೊಳ್ಳಿ’ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಅವರಿಗೆ ಜನಪ್ರತಿನಿಧಿಗಳ ಕೋರ್ಟ್ ಮೌಖಿಕವಾಗಿ ಖಡಕ್ ಎಚ್ಚರಿಕೆ ನೀಡಿರುವುದು(ಪ್ರ.ವಾ., ಏ.6) ರಾಜ್ಯದ ರಾಜಕಾರಣಿಗಳಿಗೆ ಎಚ್ಚರಿಕೆಯ ಗಂಟೆಯಾಗಲಿ.
ವಿಕಾರೀ ಸಂವತ್ಸರದಲ್ಲಿ ಈ ಲೋಕಸಭಾ ಚುನಾವಣೆ ನಡೆಯುತ್ತಿದೆ. ಅದಕ್ಕಾಗಿಯೋ ಏನೋ ಭಾಷಣಗಳಲ್ಲೂ ‘ವಿಕಾರ’, ಮಾತಿನ ಮಾಲಿನ್ಯ ಎದ್ದು ಕಾಣುತ್ತಿದೆ. ತಮ್ಮ ಮಾತುಗಳು ಸಮಾಜದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎನ್ನುವ ಅರಿವು ರಾಜಕಾರಣಿಗಳಲ್ಲಿ ಮೂಡಲಿ.