ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ | ರಾಜಕಾರಣಿಗಳು ಆತ್ಮಾವಲೋಕನ ಮಾಡಿಕೊಳ್ಳಲಿ

Last Updated 11 ಜುಲೈ 2019, 1:44 IST
ಅಕ್ಷರ ಗಾತ್ರ

ಜೀವನದ ಅಂತಿಮ ದಿನಗಳಲ್ಲಿ ಮನುಷ್ಯನನ್ನು ಆಂತರ್ಯದಲ್ಲಿ ಈ ಎರಡು ಪ್ರಶ್ನೆಗಳು ಕಾಡುತ್ತವೆ– ‘ನಾನು ಆತ್ಮಸಾಕ್ಷಿಗೆ ಅನುಗುಣವಾಗಿ ಮತ್ತು ನ್ಯಾಯಯುತವಾಗಿ ಬಾಳಿದ್ದೇನೆಯೇ? ನನ್ನನ್ನು ಸಮಾಜವು ಯೋಗ್ಯನೆಂದು ಪರಿಗಣಿಸಿದೆಯೇ?’ ಉತ್ತರವು ಇತ್ಯಾತ್ಮಕವಾಗಿದ್ದರೆ ಆ ವ್ಯಕ್ತಿಯ ಕೊನೆಯ ದಿನಗಳು ತೃಪ್ತಿ, ಸಂತೋಷದಿಂದ ಕೂಡಿರುತ್ತವೆ. ಇಂಥ ತೃಪ್ತಿಯು ಆತನ ಮುಂದಿರುವ ಎಲ್ಲಾ ದುಃಖಗಳನ್ನು ಮರೆಸಬಲ್ಲಷ್ಟು ಘನವಾದುದಾಗಿರುತ್ತದೆ. ಉತ್ತರಗಳು ನೇತ್ಯಾತ್ಮಕವಾಗಿದ್ದರೆ ಅವನ ಅಂತಿಮ ದಿನಗಳು ಹತಾಶೆಯಿಂದ ಕೂಡಿದವೂ ಅಸಹನೀಯವೂ ಆಗಿರುತ್ತವೆ. ಆ ನೋವು, ಅವನ ಸುಖ–ಸಂತೋಷವನ್ನು ನುಂಗಿ ನೊಣೆಯುವಷ್ಟು ಭೀಕರವಾದುದಾಗಿರುತ್ತದೆ.

ಕರ್ನಾಟಕದ ರಾಜಕಾರಣದಲ್ಲಿ ನಡೆಯುತ್ತಿರುವ ಅಸಹ್ಯಕರ ಬೆಳವಣಿಗೆಗಳನ್ನು ಕಂಡು ಈ ಮಾತುಗಳನ್ನು ಹೇಳುತ್ತಿದ್ದೇನೆ. ಹಿರಿಯರಾದ ದೇವೇಗೌಡರಿಂದ ಮೊದಲ್ಗೊಂಡು, ‘ಪಕ್ಷಾತೀತ’ರಾಗಿ ಇರಬೇಕಾದ ಸ್ಪೀಕರ್ ರಮೇಶ್‌ ಕುಮಾರ್ ಅವರೂ ಸೇರಿದಂತೆ ಎಲ್ಲ ರಾಜಕಾರಣಿಗಳೂ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು.

-ಎಚ್.ಆನಂದರಾಮ ಶಾಸ್ತ್ರೀ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT