<p>ಜೀವನದ ಅಂತಿಮ ದಿನಗಳಲ್ಲಿ ಮನುಷ್ಯನನ್ನು ಆಂತರ್ಯದಲ್ಲಿ ಈ ಎರಡು ಪ್ರಶ್ನೆಗಳು ಕಾಡುತ್ತವೆ– ‘ನಾನು ಆತ್ಮಸಾಕ್ಷಿಗೆ ಅನುಗುಣವಾಗಿ ಮತ್ತು ನ್ಯಾಯಯುತವಾಗಿ ಬಾಳಿದ್ದೇನೆಯೇ? ನನ್ನನ್ನು ಸಮಾಜವು ಯೋಗ್ಯನೆಂದು ಪರಿಗಣಿಸಿದೆಯೇ?’ ಉತ್ತರವು ಇತ್ಯಾತ್ಮಕವಾಗಿದ್ದರೆ ಆ ವ್ಯಕ್ತಿಯ ಕೊನೆಯ ದಿನಗಳು ತೃಪ್ತಿ, ಸಂತೋಷದಿಂದ ಕೂಡಿರುತ್ತವೆ. ಇಂಥ ತೃಪ್ತಿಯು ಆತನ ಮುಂದಿರುವ ಎಲ್ಲಾ ದುಃಖಗಳನ್ನು ಮರೆಸಬಲ್ಲಷ್ಟು ಘನವಾದುದಾಗಿರುತ್ತದೆ. ಉತ್ತರಗಳು ನೇತ್ಯಾತ್ಮಕವಾಗಿದ್ದರೆ ಅವನ ಅಂತಿಮ ದಿನಗಳು ಹತಾಶೆಯಿಂದ ಕೂಡಿದವೂ ಅಸಹನೀಯವೂ ಆಗಿರುತ್ತವೆ. ಆ ನೋವು, ಅವನ ಸುಖ–ಸಂತೋಷವನ್ನು ನುಂಗಿ ನೊಣೆಯುವಷ್ಟು ಭೀಕರವಾದುದಾಗಿರುತ್ತದೆ.</p>.<p>ಕರ್ನಾಟಕದ ರಾಜಕಾರಣದಲ್ಲಿ ನಡೆಯುತ್ತಿರುವ ಅಸಹ್ಯಕರ ಬೆಳವಣಿಗೆಗಳನ್ನು ಕಂಡು ಈ ಮಾತುಗಳನ್ನು ಹೇಳುತ್ತಿದ್ದೇನೆ. ಹಿರಿಯರಾದ ದೇವೇಗೌಡರಿಂದ ಮೊದಲ್ಗೊಂಡು, ‘ಪಕ್ಷಾತೀತ’ರಾಗಿ ಇರಬೇಕಾದ ಸ್ಪೀಕರ್ ರಮೇಶ್ ಕುಮಾರ್ ಅವರೂ ಸೇರಿದಂತೆ ಎಲ್ಲ ರಾಜಕಾರಣಿಗಳೂ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು.</p>.<p><strong>-ಎಚ್.ಆನಂದರಾಮ ಶಾಸ್ತ್ರೀ,</strong> ಬೆಂಗಳೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜೀವನದ ಅಂತಿಮ ದಿನಗಳಲ್ಲಿ ಮನುಷ್ಯನನ್ನು ಆಂತರ್ಯದಲ್ಲಿ ಈ ಎರಡು ಪ್ರಶ್ನೆಗಳು ಕಾಡುತ್ತವೆ– ‘ನಾನು ಆತ್ಮಸಾಕ್ಷಿಗೆ ಅನುಗುಣವಾಗಿ ಮತ್ತು ನ್ಯಾಯಯುತವಾಗಿ ಬಾಳಿದ್ದೇನೆಯೇ? ನನ್ನನ್ನು ಸಮಾಜವು ಯೋಗ್ಯನೆಂದು ಪರಿಗಣಿಸಿದೆಯೇ?’ ಉತ್ತರವು ಇತ್ಯಾತ್ಮಕವಾಗಿದ್ದರೆ ಆ ವ್ಯಕ್ತಿಯ ಕೊನೆಯ ದಿನಗಳು ತೃಪ್ತಿ, ಸಂತೋಷದಿಂದ ಕೂಡಿರುತ್ತವೆ. ಇಂಥ ತೃಪ್ತಿಯು ಆತನ ಮುಂದಿರುವ ಎಲ್ಲಾ ದುಃಖಗಳನ್ನು ಮರೆಸಬಲ್ಲಷ್ಟು ಘನವಾದುದಾಗಿರುತ್ತದೆ. ಉತ್ತರಗಳು ನೇತ್ಯಾತ್ಮಕವಾಗಿದ್ದರೆ ಅವನ ಅಂತಿಮ ದಿನಗಳು ಹತಾಶೆಯಿಂದ ಕೂಡಿದವೂ ಅಸಹನೀಯವೂ ಆಗಿರುತ್ತವೆ. ಆ ನೋವು, ಅವನ ಸುಖ–ಸಂತೋಷವನ್ನು ನುಂಗಿ ನೊಣೆಯುವಷ್ಟು ಭೀಕರವಾದುದಾಗಿರುತ್ತದೆ.</p>.<p>ಕರ್ನಾಟಕದ ರಾಜಕಾರಣದಲ್ಲಿ ನಡೆಯುತ್ತಿರುವ ಅಸಹ್ಯಕರ ಬೆಳವಣಿಗೆಗಳನ್ನು ಕಂಡು ಈ ಮಾತುಗಳನ್ನು ಹೇಳುತ್ತಿದ್ದೇನೆ. ಹಿರಿಯರಾದ ದೇವೇಗೌಡರಿಂದ ಮೊದಲ್ಗೊಂಡು, ‘ಪಕ್ಷಾತೀತ’ರಾಗಿ ಇರಬೇಕಾದ ಸ್ಪೀಕರ್ ರಮೇಶ್ ಕುಮಾರ್ ಅವರೂ ಸೇರಿದಂತೆ ಎಲ್ಲ ರಾಜಕಾರಣಿಗಳೂ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು.</p>.<p><strong>-ಎಚ್.ಆನಂದರಾಮ ಶಾಸ್ತ್ರೀ,</strong> ಬೆಂಗಳೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>