ಈ ಬಾರಿಯ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಸಾಧನೆ ತೃಪ್ತಿಕರವಾಗಿದೆಯಾದರೂ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಮಾದಗಳು ಆಗಿವೆ. ಸ್ಪರ್ಧಾಳುಗಳ ಆಯ್ಕೆ ಪಾರದರ್ಶಕವಾಗಿರಲಿಲ್ಲ ಅನ್ನುವುದಕ್ಕೆ ತೇಜಸ್ವಿನ್ ಶಂಕರ್ ಅವರಿಗೆ ಹೈಜಂಪ್ನಲ್ಲಿ ಭಾಗವಹಿಸುವ ಎಲ್ಲ ಅರ್ಹತೆಗಳಿದ್ದರೂ ಮೊದಲಿಗೆ ಆಯ್ಕೆಯಾಗದಿದ್ದುದೇ ನಿದರ್ಶನ. ಅನಿವಾರ್ಯವಾಗಿ ಹೈಕೋರ್ಟ್ ಮೆಟ್ಟಿಲೇರಿ ಅವರು ಸ್ಥಾನ ಪಡೆದರು. ಇದೆಲ್ಲದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದರ ನಡುವೆಯೂ ಕಂಚಿನ ಪದಕ ಗೆದ್ದರು.