ಹಿರಿಯ ರಾಜಕೀಯ ಮುತ್ಸದ್ದಿಗಳಾಗಿದ್ದ ದಿವಂಗತ ಪಂಡಿತ್ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಕೆಲವರು ನಾಲಿಗೆ ಹರಿಬಿಡುತ್ತಿರುವುದು ತೀರಾ ಖಂಡನಾರ್ಹ. ದೇಶಕ್ಕೆ ಈ ಮಹಾನ್ ನಾಯಕರ ಕೊಡುಗೆ ಅಪಾರ. ಸುದೀರ್ಘಕಾಲ ದೇಶದ ಪ್ರಧಾನಿಯಾಗಿದ್ದ ನೆಹರೂ, ಭಾರತದ ಅರ್ಥ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದರು. ಇಂದಿರಾ ಗಾಂಧಿ ಅವರೂ ದೇಶದ ಚುಕ್ಕಾಣಿ ಹಿಡಿದು, ಸುಭದ್ರ ಆಡಳಿತ ನೀಡಿದರು. ಅವರ ಕೊಡುಗೆಯೂ ಕಡಿಮೆಯೇನಿಲ್ಲ.