ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಮೇಧಾ ಪಾಟ್ಕರ್ ಅವರ ಹೇಳಿಕೆ ಹಾಗೂ ಅದಕ್ಕೆ ಡಿ.ಕೆ.ಶಿವಕುಮಾರ್ ಅವರ ಪ್ರತಿಕ್ರಿಯೆ ಓದಿ ಈ ಪತ್ರ. ಮೂಲತಃ ಇದು ‘ಬೃಹತ್’ ನೀರಾವರಿ ಯೋಜನೆ ಅಲ್ಲ. ಕಾವೇರಿ ನದಿ ಸದ್ಯಕ್ಕಂತೂ ಸಟ್ಲೆಜ್ನಂತಾಗದು. ವೃಷಭಾವತಿ ಪ್ರದೇಶದಲ್ಲಿ ಹಿಂದಿನ ವರ್ಷ ತುಸು ಸುಧಾರಣೆ ಆಗಿದೆ. ಮೇಧಾ ಅವರು ಹೇಳಿರುವ ಇತರ ಅಂಶಗಳು ಸುಮಾರು ಮೂವತ್ತು ವರ್ಷ ಹಳೆಯವು. ಈ ಯೋಜನೆಗೆ ವಿದೇಶಿ ಆರ್ಥಿಕ ನೆರವು ದೊರಕುವ ಬಗೆಗೆ ಮಾಹಿತಿ ಇಲ್ಲ. ಮುಳುಗಡೆಯಾಗುವ ಐದು ಹಳ್ಳಿಗಳಲ್ಲಿ ಆದಿವಾಸಿಗಳು ಎಷ್ಟಿದ್ದಾರೆ? ತಿಳಿಯಲಿ. ಅರಣ್ಯ ಭೂಮಿಯಲ್ಲಿ ಅಭಯಾರಣ್ಯದ ಪ್ರದೇಶವೇ ಹೆಚ್ಚು. ಸಂಭಾವ್ಯ ಹಾನಿಯ ನಿಖರ ಅಂದಾಜು ಆಗಬೇಕು.