‘ಪವಿತ್ರ ಬಂಧಕ್ಕೆ ಅತ್ಯಾಚಾರ ಆರೋಪದ ನರಳಿಕೆ ಏಕೆ?’ ಎಂಬ ವಕೀಲ ಸಿ.ಎಚ್.ಹನುಮಂತರಾಯ ಅವರ ಅಭಿಪ್ರಾಯ (ಪ್ರ.ವಾ., ಏ. 9) ಪ್ರಸ್ತುತತೆಗೆ ಸ್ಪಂದಿಸುವಂತಿದೆ. ವೈವಾಹಿಕ ಅತ್ಯಾಚಾರವನ್ನು ಶಿಕ್ಷಾರ್ಹವಾಗಿಸಬೇಕೆಂಬ ನ್ಯಾಯಾಲಯದ ಆದೇಶ ನಿಸ್ಸಂದೇಹವಾಗಿ ಭಾರತೀಯ ಕೌಟುಂಬಿಕ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಪಾಶ್ಚಾತ್ಯ ಸಾಮಾಜಿಕ ಮೌಲ್ಯಗಳತ್ತ ವಾಲುತ್ತಿರುವ ನಮ್ಮ ಯುವಜನತೆ, ಈ ರೀತಿಯ ಆದೇಶಗಳು ಒಂದು ವೇಳೆ ಶಾಸನಗಳಾದರೆ ಅವುಗಳ ಅಡಿಯಲ್ಲಿ ಸಾಂಸಾರಿಕ ಬದುಕನ್ನು ವಿಘಟನೆಯತ್ತ ಕೊಂಡೊಯ್ಯಲು ಹಿಂಜರಿಯುವುದಿಲ್ಲ.