ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸುತ್ತಿರುವ ಬೆಳವಣಿಗೆಯನ್ನು ಗಮನಿಸಿದರೆ, ಸರ್ಕಾರ ಎಂಥಾ ಅವಿವೇಕತನದಿಂದ ಈ ಸ್ಥಿತಿಯನ್ನು ನಿಭಾಯಿಸುತ್ತಿದೆ ಎಂಬುದು ತಿಳಿಯುತ್ತದೆ. ಒಂದೂವರೆ ತಿಂಗಳಿಂದಲೂ ಸರಿಯಾಗಿ ಊಟ ಸಿಕ್ಕರೆ ಅದೇ ಮಹಾಭಾಗ್ಯ ಎಂದುಪರಿತಪಿಸಿದ್ದ ಕಾರ್ಮಿಕರನ್ನು ಊರಿಗೆ ಕಳುಹಿಸುವುದಕ್ಕೆ ಆರಂಭದಲ್ಲಿ ದುಪ್ಪಟ್ಟು ಪ್ರಯಾಣ ದರ ವಿಧಿಸಿದ್ದು ಹೇಗೆ ಸಮರ್ಥನೀಯ? ಕಾರ್ಮಿಕರು ಅಷ್ಟೊಂದು ಹಣವನ್ನು ಎಲ್ಲಿಂದ ತರುತ್ತಾರೆ ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲವಾಯಿತೇ?