ಸುಮಾರು 50 ವರ್ಷಗಳ ಕಾಲ ಪಕ್ಷವು ತಮಗೆ ಕೊಟ್ಟ ಯಾವುದೇ ಜವಾಬ್ದಾರಿಯನ್ನು ತುಂಬ ಶ್ರದ್ಧೆ ಮತ್ತು ಘನತೆಯಿಂದ ಪೂರೈಸಿದ ನಾಯಕ ಇವರು. ‘ನಾನು ದಲಿತ ಎಂಬ ಕಾರಣಕ್ಕೆ ಸಿ.ಎಂ ಪಟ್ಟ ಸಿಗುವುದಾದರೆ, ಅದು ನನಗೆ ಬೇಡ’ ಎಂದವರು. ತಡಮಾಡದೆ ಖರ್ಗೆ ಅವರನ್ನು ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸುವ ವಿವೇಕ ಈಗಲಾದರೂ ಕಾಂಗ್ರೆಸ್ಸಿಗರಿಗೆ ಬರಲಿ.
-ರಘುನಂದನ,ಬೆಂಗಳೂರು