ಮೈತ್ರಿ ಸರ್ಕಾರದ ಅಳಿವು ಉಳಿವು ಏನೇ ಆಗಿರಲಿ, ನಮ್ಮ ರಾಜಕಾರಣಿಗಳ ವರ್ತನೆ ಮಾತ್ರ ಅಸಹ್ಯ ಹುಟ್ಟಿಸುತ್ತಿದೆ. ಮಳೆ–ಬೆಳೆ ಇಲ್ಲದೆ ಜನರು, ರೈತರು ಕೊರಗುತ್ತಿದ್ದರೆ, ಇವರು ಅಧಿಕಾರಕ್ಕಾಗಿ ಹೊಡೆದಾಡಿಕೊಳ್ಳುತ್ತಿರುವುದು ಪರಮ ಅಸಹ್ಯಕರ.
ತಮ್ಮ ಜವಾಬ್ದಾರಿ, ಸ್ಥಾನದ ಘನತೆಯ ಬಗ್ಗೆ ಪ್ರಜ್ಞೆಯಿರದ ಇವರಿಂದ ಏನನ್ನಾದರೂ ಅಪೇಕ್ಷಿಸುವುದು ಮೂರ್ಖತನವಾದೀತು. -ನಂದಿನಿ ಕೆ.ಎಂ., ದಾವಣಗೆರೆ