ಆದರೆ ವಿದ್ಯುತ್ ಅವಘಡದಿಂದ ಕಲಾಸಮುಚ್ಚಯವನ್ನು ಒಂದು ವರ್ಷದಿಂದ ಮುಚ್ಚಿರುವುದರಿಂದ ಸಂಘ–ಸಂಸ್ಥೆಗಳಿಗೆ, ನಾಟಕ ತಂಡಗಳಿಗೆ ತೊಂದರೆಯಾಗಿದೆ. ಕಲಾಸಕ್ತರಿಗೆ ನಿರಾಸೆಯಾಗಿದೆ. ಸಂಬಂಧಿಸಿದ ಇಲಾಖೆಯವರು ಮನಸ್ಸು ಮಾಡಿದ್ದರೆ ಒಂದು ದಿನದಲ್ಲಿ ಇದನ್ನು ದುರಸ್ತಿಪಡಿಸಬಹುದಿತ್ತು. ಆದರೆ ಇಲಾಖೆ ಮತ್ತು ವಿವಿಧ ಅಕಾಡೆಮಿಗಳು ಅವಘಡಕ್ಕೆ ಸಂಬಂಧಿಸಿದಂತೆ ಪರಸ್ಪರ ದೂಷಣೆಯಲ್ಲಿ ತೊಡಗಿವೆಯೇ ಹೊರತು ದುರಸ್ತಿಗೆ ಮುಂದಾಗುತ್ತಿಲ್ಲ.