ವ್ಯಾಸರಿಗೆ ಸರಿಸಮನಾಗಿ ಮಹಾಭಾರತವನ್ನು ಉಜ್ವಲವಾಗಿ ರಚಿಸಿದ ಗದುಗಿನ ನಾರಣಪ್ಪ ‘ಕುಮಾರ ವ್ಯಾಸ’ನಾಗಿದ್ದರಲ್ಲಿ ತಪ್ಪೇನಿಲ್ಲ. ಕನ್ನಡ ಜನಸಮೂಹ ಕೂಡ ಆತನನ್ನು ‘ಕುಮಾರವ್ಯಾಸ’ನೆಂದೇ ಒಪ್ಪಿ, ಹಾಗೆಯೇ ಗುರುತಿಸಿಕೊಂಡು ಬಂದಿದೆ. ಇಂತಹ ಒಂದು ತರ್ಕದ ಬಗ್ಗೆ ‘ಅಭಿನವ ಬೇಂದ್ರೆ’ ಪ್ರಶಸ್ತಿಯನ್ನು ಕೊಟ್ಟವರು ಯೋಚಿಸಿದಂತಿಲ್ಲ. ಬೇಂದ್ರೆಯವರಿಗೆ ಸರಿಸಮನಾಗಿ ನಿಲ್ಲಬಲ್ಲಂತಹ ಕವಿಯೊಬ್ಬ ಬರುವುದು ಅಸಂಭವ. ಹೀಗಿರುವಾಗ ಬೇಕಾಬಿಟ್ಟಿಯಾಗಿ ಹೀಗೆ ಪ್ರಶಸ್ತಿಗಳನ್ನು ಕೊಡುತ್ತಾ ಹೋದರೆ, ಈಗಾಗಲೇ ಸಾರ್ವಜನಿಕರ ನಂಬಿಕೆ- ವಿಶ್ವಾಸವನ್ನು ಕಳೆದುಕೊಂಡಿರುವ ಸಾಹಿತ್ಯ ಕ್ಷೇತ್ರವು ಮತ್ತಷ್ಟು ನಗೆಪಾಟಲಿಗೆ ಈಡಾಗುವುದ
ರಲ್ಲಿ ಸಂಶಯವಿಲ್ಲ. ನಾಳೆ ಹೀಗೆಯೇ ಇನ್ನು ಕೆಲವರು ‘ಅಭಿನವ ಕುವೆಂಪು’, ‘ಅಭಿನವ ಡಿವಿಜಿ’, ‘ಅಭಿನವ ಅಡಿಗ’ ಇತ್ಯಾದಿ ಪ್ರಶಸ್ತಿಗಳನ್ನು ಕೊಡಲು ಮುಂದಾದರೆ, ಕನ್ನಡ ಸಾಹಿತ್ಯ ಕ್ಷೇತ್ರವನ್ನು ಮೇಲಕ್ಕೆ ಎತ್ತುವವರ್ಯಾರು?