ಕನ್ನಡ ಚಲನಚಿತ್ರರಂಗ ಐವತ್ತು ವರ್ಷ ಪೂರೈಸಿದ ಸಂದರ್ಭದಲ್ಲಿ, ಆ ಉತ್ಸವ ಸಮಿತಿಯಲ್ಲಿದ್ದ ಪತ್ರಕರ್ತ ಬಿ.ವಿ.ವೈಕುಂಠರಾಜು ಅವರು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರನ್ನು ಭೇಟಿ ಮಾಡಿ, ಡಾ. ರಾಜ್ಕುಮಾರ್ ಅವರ ನಾಯಕತ್ವ ಬಳಸಿಕೊಂಡು ‘ಚಿತ್ರನಗರಿ’ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕೆಂದು ಹೇಳಿದ್ದರು. ಈ ಕುರಿತು ಚಿತ್ರೋದ್ಯಮದ ಪರಾಮರ್ಶೆ ಅಗತ್ಯ.