ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ಅವರು ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಬಗ್ಗೆ ಮತ್ತೆ ಅನುಮಾನ ವ್ಯಕ್ತಪಡಿಸಿ, ಬ್ಯಾಲೆಟ್ ಬಾಕ್ಸುಗಳೇ ಬೇಕು ಎಂದಿದ್ದಾರೆ. ಇವರಂತೆ ಇನ್ನೂ ಅನೇಕ ರಾಜಕೀಯ ನಾಯಕರು ಹೀಗೇ ಹೇಳುತ್ತಿದ್ದಾರೆ.
ಇವರೆಲ್ಲರ ಅಭಿಪ್ರಾಯದಂತೆ, ಬಿಜೆಪಿ ಗೆಲುವಿಗೆ ಇವಿಎಂಗಳೇ ಕಾರಣ. ಹಾಗಾದರೆ ದೆಹಲಿಯ ಈಗಿನ ಚುನಾವಣೆಯಲ್ಲಿ ಬಿಜೆಪಿ ಏಕೆ ಗೆಲ್ಲಲಿಲ್ಲ?