ಧರ್ಮದರ್ಶನ, ಮಾರ್ಗದರ್ಶನ, ಸನ್ನಡತೆ, ಸದಾಚಾರದ ಪಾಠ ಮಾಡಬೇಕಾದ ಮಠಗಳು, ಸ್ವಾಮಿಗಳು– ಕಾವಿಧಾರಿಗಳ ಕಾದಾಟದ ಕೇಂದ್ರಗಳಾಗುತ್ತಿವೆ. ಭಕ್ತರ ಬಣಗಳನ್ನು ಹಿಂದಿಟ್ಟುಕೊಂಡು ಕೆಲವರು ಗದ್ದುಗೆಗಾಗಿ ಗುದ್ದಾಡುತ್ತಿದ್ದಾರೆ.
ಇದನ್ನೆಲ್ಲ ನೋಡಿ ರಾಜಕಾರಣಿಗಳೂ ನಗುವಂತಾಗಿದೆ! ಇಂಥವರಿಂದ ಧರ್ಮ, ಸಂಸ್ಕೃತಿ ರಕ್ಷಣೆ ಸಾಧ್ಯವೇ? ‘ಮಠಗಳು ಸಂಸ್ಕೃತಿ ಉಳಿಸುವ ಕೇಂದ್ರಗಳು’ ಎಂದು ಸ್ವಾಮೀಜಿಯೊಬ್ಬರು ಹೇಳಿರುವ ಕಾರಣ ಇವು ಕಣ್ಣು ಮುಂದೆ ಹಾದುಹೋದವು. -ಪ್ರೊ.ಆರ್.ವಿ. ಹೊರಡಿ,ಧಾರವಾಡ