ವಲಸೆ ಕಾರ್ಮಿಕರು ಲಕ್ಷಾಂತರ ಸಂಖ್ಯೆಯಲ್ಲಿ ಮನೆಗೆ ಹಿಂತಿರುಗುವ ಪರಿಸ್ಥಿತಿ ಬಂದಿದ್ದು ವಿಷಾದನೀಯ ಬೆಳವಣಿಗೆ. ಹಾಗೆಯೇ ಅವರು ವಾಪಸ್ ತೆರಳುವುದಕ್ಕೆ ಪರೋಕ್ಷವಾಗಿ ತಡೆಯೊಡ್ಡುವ ರೀತಿಯಲ್ಲಿ ರೈಲು ಸೇವೆ ರದ್ದುಪಡಿಸಿರುವುದೂ ಸರಿಯಾದ ಕ್ರಮವಲ್ಲ.
ಇದು, ಈ ರಾಜ್ಯದಲ್ಲಿ ಕಾರ್ಮಿಕರು ಇಲ್ಲ ಮತ್ತು ಇಲ್ಲಿಗೆ ವಲಸೆ ಕಾರ್ಮಿಕರು ಅನಿವಾರ್ಯ ಎನ್ನುವ ಹತಾಶ ಸ್ಥಿತಿಯನ್ನು ತೋರಿಸುತ್ತದೆ.
ಈ ಬೆಳವಣಿಗೆಯನ್ನು ಸ್ಥಳೀಯ ಕಾರ್ಮಿಕರಿಗೆ ಉದ್ಯೋಗ ನೀಡಲು ಬಳಸಿಕೊಳ್ಳಬೇಕು ಮತ್ತು ಅವರಿಗೆ ಕೌಶಲ ತರಬೇತಿ ಕೊಡಬೇಕು. ಕಟ್ಟಡ ನಿರ್ಮಾಣ ಸಂಸ್ಥೆಗಳು ಲಾಭದ ಆಸೆಗಾಗಿ ಕಡಿಮೆ ಕೂಲಿಗೆ ವಲಸೆ ಕಾರ್ಮಿಕರನ್ನು ಬಳಸಿಕೊಳ್ಳುವುದನ್ನು ನಿಯಂತ್ರಿಸಲು ಇದು ಸಕಾಲ.