ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃಗಾಲಯ ತೆರವಿಗೆ ಚಿಂತಿಸಲಿ

Last Updated 7 ಮೇ 2020, 20:15 IST
ಅಕ್ಷರ ಗಾತ್ರ

ಲಾಕ್‍ಡೌನ್‌ನಿಂದ ಮನೆಯೊಳಗೆ ಬಂದಿಯಾಗಿರುವವರಲ್ಲಿ ಹಲವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಹೀಗಿರುವಾಗ, ದೇಶದ ಹತ್ತಾರು ಮೃಗಾಲಯಗಳಲ್ಲಿ ಬಂಧಿಸಿಟ್ಟಿರುವ ನಾನಾ ತಳಿಯ ಪ್ರಾಣಿ– ಪಕ್ಷಿಗಳನ್ನು ನೆನೆಸಿಕೊಂಡರೆ ಅಯ್ಯೋ ಎನಿಸದಿರದು.

ವನ್ಯಜೀವಿಗಳು ಕಾಡುಮೇಡುಗಳಲ್ಲಿ ಸ್ವಚ್ಛಂದವಾಗಿ ಬದುಕುವಂತಹವು. ಮನುಷ್ಯನು ಪ್ರಾಣಿಗಳನ್ನು ನೋಡಬಯಸುವುದಾದರೆ, ಈಗಾಗಲೇ ಇರುವ ಸಫಾರಿಗಳನ್ನು ಬಳಸಿಕೊಳ್ಳಲು ಉತ್ತೇಜಿಸಬೇಕು.

ಆಗ ಪ್ರಾಣಿಗಳನ್ನು ಕಾಡಿನೊಳಗೆ ಸ್ವತಂತ್ರವಾಗಿ ಓಡಾಡುವ ಕ್ರಿಯೆಯಲ್ಲಿಯೇ ಕಾಣಬಹುದು. ಇದರಿಂದ ಪ್ರಾಣಿಗಳ ಸ್ವಾತಂತ್ರ್ಯ ಮತ್ತು ಮನುಷ್ಯನ ಪ್ರಾಣಿ ವೀಕ್ಷಣೆ ಬಯಕೆ ಎರಡಕ್ಕೂ ಧಕ್ಕೆಯಾಗದು. ಹಾಗಾಗಿ, ಮೃಗಾಲಯಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತಿಸುವುದು ಒಳಿತು.

-ಪುನೀತ್ ಎನ್.,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT