ಎರಡನೇ ಮದುವೆ ಆಗಬಾರದು, ಸಿನಿಮಾದಲ್ಲಿ ಅಭಿನಯಿಸಬಾರದು, ಅಧಿಕಾರಿಗಳಿಂದ ಹಣ ಪಡೆದು ವರ್ಗಾವಣೆಗೆ ಸಂಬಂಧಿಸಿದಂತೆ ಯಾವುದೇ ಒತ್ತಡ ಹೇರಬಾರದು, ಒಂದು ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಅದಕ್ಕೆ ತಗಲುವ ಖರ್ಚು ವೆಚ್ಚವನ್ನು ಸ್ವಯಂ ಭರಿಸಬೇಕು, ಒಮ್ಮೆ ಗೆದ್ದಂತಹವರು ಜೀವನಪೂರ್ತಿ ಪಿಂಚಣಿ ಪಡೆಯಲು ಅರ್ಹರಲ್ಲ, ಉತ್ತಮ ಕೆಲಸ ಮಾಡಿದರಷ್ಟೇ ಸಚಿವರಾಗಲು ಅರ್ಹತೆ, ಇಲ್ಲವಾದರೆ ಹಿಂಬಡ್ತಿ ಪಡೆದು ಬೇರೆಯವರಿಗೆ ಅವಕಾಶ ನೀಡಲು ಸಹಕರಿಸುವಂತಹ ವಿಷಯಗಳನ್ನು ಒಳಗೊಂಡ ಕಾನೂನು ರಚಿಸಬೇಕು. ಏಕೆಂದರೆ, ಬೇಲಿ ಭದ್ರವಾಗಿದ್ದರೆ ಮಾತ್ರ ಫಸಲಿಗೆ ಹಾನಿಯಾಗದಂತೆ ನೋಡಿಕೊಳ್ಳಲು ಸಾಧ್ಯ ಅಲ್ಲವೇ?