ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರತಿನಿಧಿಗಳಿಗೂ ಇರಲಿ ಕಡಿವಾಣ

Last Updated 8 ಮೇ 2020, 18:34 IST
ಅಕ್ಷರ ಗಾತ್ರ

ಸರ್ಕಾರಿ ನೌಕರರಲ್ಲಿ ಇನ್ನಷ್ಟು ಶಿಸ್ತು ಮೂಡಿಸಲು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ– 1957ಕ್ಕೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿರುವುದು ಉತ್ತಮ ಕ್ರಮವಾಗಿದೆ. ಆದರೆ ಇಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಸರ್ಕಾರಿ ನೌಕರರಿಗೆ ಮಾತ್ರ ಜಾರಿಗೊಳಿಸದೆ, ರಾಜಕೀಯ ವ್ಯಕ್ತಿಗಳಿಗೂ ಅನ್ವಯಿಸಬೇಕು.‌

ಎರಡನೇ ಮದುವೆ ಆಗಬಾರದು, ಸಿನಿಮಾದಲ್ಲಿ ಅಭಿನಯಿಸಬಾರದು, ಅಧಿಕಾರಿಗಳಿಂದ ಹಣ‌ ಪಡೆದು ವರ್ಗಾವಣೆಗೆ ಸಂಬಂಧಿಸಿದಂತೆ ಯಾವುದೇ ಒತ್ತಡ ಹೇರಬಾರದು, ಒಂದು ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಅದಕ್ಕೆ ತಗಲುವ ಖರ್ಚು ವೆಚ್ಚವನ್ನು ಸ್ವಯಂ ಭರಿಸಬೇಕು, ಒಮ್ಮೆ ಗೆದ್ದಂತಹವರು ಜೀವನಪೂರ್ತಿ ಪಿಂಚಣಿ ಪಡೆಯಲು ಅರ್ಹರಲ್ಲ, ಉತ್ತಮ ಕೆಲಸ ಮಾಡಿದರಷ್ಟೇ ಸಚಿವರಾಗಲು ಅರ್ಹತೆ, ಇಲ್ಲವಾದರೆ ಹಿಂಬಡ್ತಿ ಪಡೆದು ಬೇರೆಯವರಿಗೆ ಅವಕಾಶ ನೀಡಲು ಸಹಕರಿಸುವಂತಹ ವಿಷಯಗಳನ್ನು ಒಳಗೊಂಡ ಕಾನೂನು ರಚಿಸಬೇಕು. ಏಕೆಂದರೆ, ಬೇಲಿ ಭದ್ರವಾಗಿದ್ದರೆ ಮಾತ್ರ ಫಸಲಿಗೆ ಹಾನಿಯಾಗದಂತೆ ನೋಡಿಕೊಳ್ಳಲು ಸಾಧ್ಯ ಅಲ್ಲವೇ?

ಚೆಲುವರಾಜು ಕೆ.,ಧನಗೆರೆ, ಕೊಳ್ಳೇಗಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT