ಇವುಗಳಲ್ಲದೆ, ಪ್ರತಿವರ್ಷ ಕೆಲವು ಕಂಪನಿಗಳ ಸಾಲ ಮನ್ನಾ ಮಾಡುತ್ತಿರುವುದರಿಂದ ಆಗುತ್ತಿರುವ ನಷ್ಟವನ್ನು ಸೇರಿಸಿದರೆ ಅದು ಇನ್ನೂ ಹೆಚ್ಚಾಗುತ್ತದೆ. ಈ ನಷ್ಟವನ್ನು ತುಂಬಲು ಕೇಂದ್ರ ಸರ್ಕಾರವು ‘ತೆರಿಗೆದಾರರ ಹಣ’ವನ್ನು ಬ್ಯಾಂಕುಗಳಿಗೆ ಉತ್ತೇಜನಕಾರಿ ನಿಧಿಯನ್ನಾಗಿ ನೀಡುತ್ತದೆ. ಈ ವಿಷಚಕ್ರ ನಿರಂತರವಾಗಿ ಸಾಗಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕುಗಳ ದೀರ್ಘಕಾಲದ ಸುಸ್ಥಿರತೆಗೆ ಸುಪ್ರೀಂ ಕೋರ್ಟ್ ಒಂದು ಯೋಜನೆಯನ್ನು ನೀಡಬಹುದೆಂಬ ನಿರೀಕ್ಷೆ ಜನರದ್ದಾಗಿದೆ.
-ಟಿ.ಸುರೇಂದ್ರ ರಾವ್,ಬೆಂಗಳೂರು