ಒಮ್ಮೆ ಎಂಜಿನಿಯರ್ಗಳು ಪ್ರಾಥಮಿಕ ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸಿದರೆ ಹಾಲಿ ಇರುವ ಶಿಕ್ಷಕರಲ್ಲಿ ಕೀಳರಿಮೆ ಉಂಟಾಗಬಹುದು. ಇರುವ ಶಿಕ್ಷಕರಿಗೆ ಶಿಸ್ತುಬದ್ಧ ಪ್ರಶಿಕ್ಷಣ ಹಾಗೂ ಅನರ್ಹ, ಅನಾಸಕ್ತ ಶಿಕ್ಷಕರಿಗೆ ಸ್ವಯಂ ನಿವೃತ್ತಿ, ಕಾಲೇಜು ಕಟ್ಟಡ, ಪ್ರಯೋಗಾಲಯಗಳಿಗೆ ಹೊಸತನದ ಸ್ಪರ್ಶ, ಪೋಷಕರಿಗೆ ತಿಳಿವಳಿಕೆಯಂತಹ ಕ್ರಮಗಳು ಅತ್ಯಗತ್ಯ. ಇದರಲ್ಲಿ ಶಿಕ್ಷಣಾಸಕ್ತ ಸಂಘ ಸಂಸ್ಥೆಗಳ ಪಾತ್ರವೂ ಇದೆ. ಹೀಗಾಗಿ ಈ ನಿರ್ಧಾರದ ಸಾಧಕ– ಬಾಧಕಗಳ ಬಗ್ಗೆ ಇನ್ನಷ್ಟು ಚರ್ಚೆ ಅವಶ್ಯಕ.