1992ರಲ್ಲಿ ನಡೆದ ಅಯೋಧ್ಯೆ ಹತ್ಯಾಕಾಂಡ ಭೀಕರವಾದದ್ದು. ಅದು ಅಮಾಯಕ ಜನರನ್ನು ಸಾವು ನೋವಿಗೆ ದೂಡಿತು. ಅನಾದಿ ಕಾಲದಿಂದಲೂ ಭಾರತ ದೇಶವು ಸಕಲಧರ್ಮ ಸೌಹಾರ್ದವನ್ನು ಒಳಗೊಂಡಿದೆ. ರಾಜಕೀಯ ಪಕ್ಷಗಳು ಹುಟ್ಟುವ ಮೊದಲಿನಿಂದಲೇ ಕೋಮು ಸೌಹಾರ್ದದ ಭಾವನೆಯು ಜನರ ಮನಸ್ಸಿನಲ್ಲಿ ಅಂತರ್ಗತವಾಗಿದೆ. ಫಟಿಂಗ ರಾಜಕಾರಣಿಗಳು ಅಯೋಧ್ಯೆಯ ತೀರ್ಪನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ. ಜೊತೆಗೆ, ನೆಟ್ಟಿಗರು ಸಾಮಾಜಿಕ ಜಾಲತಾಣಗಳ ಮೂಲಕ ಹರಿಯಬಿಡುವ ಹೇಳಿಕೆಗಳೂ ಪ್ರಚೋದನಕಾರಿ ಆಗಿರುವ ಸಾಧ್ಯತೆ ಇರುತ್ತದೆ. ಜನರು ಇದರಿಂದೆಲ್ಲ ತಮ್ಮ ಭಾವನೆಯು ಉದ್ದೀಪನಗೊಳ್ಳದಂತೆ ಎಚ್ಚರ ವಹಿಸಬೇಕು. ತೀರ್ಪಿನ ಪರ– ವಿರೋಧದ ಏಕಪಕ್ಷೀಯ ಪ್ರಚಾರಕ್ಕೆ ಅವಕಾಶ ನೀಡದೆ ರಾಮರಾಜ್ಯದ ಆದರ್ಶ ಪಾಲನೆ ಮಾದರಿಯಾಗಬೇಕು.