ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಈಗಲಾದರೂ ಪ್ರಕೃತಿಗೆ ನಮಿಸೋಣ

Last Updated 21 ಅಕ್ಟೋಬರ್ 2020, 17:48 IST
ಅಕ್ಷರ ಗಾತ್ರ

ಭೂಮಿ, ಜೀವಜಂತುಗಳು ಹುಟ್ಟಿಬಂದ ರೀತಿ ಹಾಗೂ ಮನುಷ್ಯ ತಾನೇ ತೀವ್ರಗತಿಯಲ್ಲಿ ನಡೆದುಬಂದ ಪ್ರಗತಿಪಥದಿಂದಾಗಿ ತಂದುಕೊಂಡ ಅಧೋಗತಿಯನ್ನು ಸತೀಶ್ ತೀರ್ಥಹಳ್ಳಿ ಕಾವ್ಯಾತ್ಮಕವಾಗಿ ಬಣ್ಣಿಸಿದ್ದಾರೆ (ಸಂಗತ, ಅ. 19). ಅಂತರಂಗದ ಒಳನೋಟವನ್ನೇ ಮರೆತು ಬರೀ ಬಹಿರಂಗದ ಬದುಕಿಗೆ ತೆರೆದುಕೊಂಡವರು, ಖ್ಯಾತನಾಮರಾಗಲು ಹವಣಿಸುತ್ತಾ, ಮನ್ನಣೆಗಾಗಿ ಕೊಳಕು ವ್ಯವಸ್ಥೆಯಲ್ಲಿ ಪಾಲ್ಗೊಂಡವರು ಇಂದಿನ ಸ್ಥಿತಿಗೆ ಏನು ಹೇಳುತ್ತಾರೆ?

ಮನುಷ್ಯರು ಭೂಮಿಗೆ ಅತಿಥಿಗಳಾಗಿ ಬಂದವರೇ ವಿನಾ ಒಡೆಯರಲ್ಲ. ಈಗಲಾದರೂ ನಮ್ಮ ಅಹಂ ಬದಿಗಿಟ್ಟು, ತಪ್ಪೊಪ್ಪಿಕೊಂಡು, ಪ್ರಕೃತಿಗೆ ನಮೋ ಎನಬಾರದೇ?

- ಸಿದ್ರಾಮಪ್ಪ ದಿನ್ನಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT