ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಉಳಿದಿವೆ. ಹಾಗಾಗಿ ಬಿಜೆಪಿಯ ವರಿಷ್ಠರು ಎಚ್ಚೆತ್ತುಕೊಂಡಂತಿದೆ. ಬಿ.ಎಸ್.ಯಡಿಯೂರಪ್ಪ ಅವರನ್ನು ಕಡೆಗಣಿಸಿದರೆ ಕರ್ನಾಟಕದಲ್ಲಿ ಪಕ್ಷದ ಗತಿ ಏನಾಗಬಹುದು ಎಂಬುದು ಈ ಹಿಂದೆ ಒಮ್ಮೆ ಗೊತ್ತಾಗಿದೆ. ಪುನಃ ಅಂತಹ ಪರಿಸ್ಥಿತಿ ತಂದುಕೊಳ್ಳುವುದು ಬೇಡ ಎಂದು ಈ ಸಲ ಜಾಣನಡೆ ಪ್ರದರ್ಶಿಸಿದ್ದಾರೆ. ಅದರ ಫಲವೇ ಕೇಂದ್ರ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿಗೆ ಯಡಿಯೂರಪ್ಪ ಅವರ ಸೇರ್ಪಡೆ.
75 ವರ್ಷ ದಾಟಿದವರಿಗೆ ಪಕ್ಷದಲ್ಲಿ ಪ್ರಮುಖ ಹುದ್ದೆಗಳನ್ನು ನೀಡಬಾರದು ಎಂಬ ನಿಯಮವನ್ನು ಬಿಜೆಪಿ ಪಾಲಿಸುತ್ತಿದೆ ಎಂಬ ಮಾತಿದೆಯಾದರೂ ಅನಿವಾರ್ಯವಾದರೆ ಇಂತಹ ನಿಯಮಗಳು ಯಾವುವೂ ಲೆಕ್ಕಕ್ಕೆ ಬರುವುದಿಲ್ಲ ಎಂಬುದಕ್ಕೆ ಯಡಿಯೂರಪ್ಪ ಅವರ ಸೇರ್ಪಡೆಯೇ ಒಂದು ಸ್ಪಷ್ಟ ನಿದರ್ಶನ. –ಅರುಣ್ಕುಮಾರ್ ಎಸ್.ಬಿ.,ತುಮಕೂರು