ಗಂಗಾ ನದಿ ಶುದ್ಧೀಕರಣಕ್ಕೆ ಕೇಂದ್ರ ಸರ್ಕಾರವು ₹ 30,000 ಕೋಟಿ ಮಂಜೂರು ಮಾಡಿದೆ ಎಂದು ವರದಿಯಾಗಿದೆ. ಕೇಂದ್ರ ಜಲ ಆಯೋಗದ ವರದಿಯಂತೆ, ಗಂಗಾ ನದಿಯು ಒಳಚರಂಡಿ ವ್ಯವಸ್ಥೆಯಿಂದ ಮಲಿನವಾಗಿದೆ. ನದಿಯ ಬದಿಯಲ್ಲಿರುವ ಪಟ್ಟಣ, ಹಳ್ಳಿಗಳ 50 ಕೋಟಿ ಜನರ ಮಲ– ಮೂತ್ರ, ಕಾರ್ಖಾನೆ ತ್ಯಾಜ್ಯದಿಂದ ನೀರು ಕಲುಷಿತವಾಗಿದೆ. ಆದ್ದರಿಂದ ಗಂಗಾ ನದಿಯ ಮಾಲಿನ್ಯ ತೊಳೆಯಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಹೇಳಿದೆ.