ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿವು ನೀಗಿಸಿ, ಶೀರ್ ಕುರ್ಮಾ ತಿನ್ನಿಸಿ

ಅಕ್ಷರ ಗಾತ್ರ

ಮುಸ್ಲಿಮರಿಗೆ ಬಹಳ ಪವಿತ್ರವಾದ ರಂಜಾನ್ ತಿಂಗಳು ಆರಂಭವಾಗಿದೆ. ಸಂಯಮ ಮತ್ತು ಸೌಹಾರ್ದವನ್ನು ಪುನರುಜ್ಜೀವಿಸುವ ಅಪೂರ್ವ ಅವಕಾಶ. ಬಡತನ, ಹಸಿವು, ನಿರುದ್ಯೋಗ ಇವುಗಳಿಗೆ ಜಾತಿ ಧರ್ಮಗಳಿಲ್ಲ. ಈ ತಿಂಗಳು ಜಾತಿಭೇದವಿಲ್ಲದೇ ಬಡವರಿಗೆ ಅನ್ನ ನೀಡಿ, ಹಸಿವನ್ನು ನೀಗಿಸಿ, ಶೀರ್ ಕುರ್ಮಾ ತಿನ್ನಿಸಿ, ಜೀವನೋಪಾಯವನ್ನು ಕಲ್ಪಿಸಿ. ಈ ತಿಂಗಳ ಎಲ್ಲ ವಿಶೇಷ ಆಚರಣೆಗಳಲ್ಲಿ, ಮಸೀದಿಗಳ ಒಳಭಾಗದ ದರ್ಶನಕ್ಕಾಗಿ ನೆರೆಹೊರೆಯ ದೇಶಬಾಂಧವರನ್ನು ಆಹ್ವಾನಿಸಿ. ಮಸೀದಿಯೂ ಈ ದೇಶದ ಸಂವಿಧಾನ ನೀಡಿದ ಹಕ್ಕುಗಳಲ್ಲಿ ಒಂದು ಎಂಬುದನ್ನು ಪ್ರತಿಪಾದಿಸಲು, ಮಸೀದಿಯಲ್ಲಿ ಸಂವಿಧಾನದ ಪ್ರಸ್ತಾವನೆಯ ಭಿತ್ತಿಚಿತ್ರವನ್ನು ಹಾಕಿ.

ಕಳೆದ ಕೆಲವು ದಿನಗಳಿಂದ ಸಮಾಜದ ಎಲ್ಲ ಸಮುದಾಯದವರ ಮನಸ್ಸುಗಳಲ್ಲಿ ಅಶಾಂತಿ, ಅಸಮಾಧಾನ, ಅಸಂಯಮ ಮನೆಮಾಡಿದೆ. ಅದನ್ನು ಹೋಗಲಾಡಿಸುವಂತೆ ನಿಮ್ಮ ಎಲ್ಲ ಪ್ರಾರ್ಥನೆಗಳಲ್ಲಿ ಅಲ್ಲಾಹುವಿನಲ್ಲಿ ಬೇಡಿಕೊಳ್ಳಿ.

- ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT