ಮುಸ್ಲಿಮರಿಗೆ ಬಹಳ ಪವಿತ್ರವಾದ ರಂಜಾನ್ ತಿಂಗಳು ಆರಂಭವಾಗಿದೆ. ಸಂಯಮ ಮತ್ತು ಸೌಹಾರ್ದವನ್ನು ಪುನರುಜ್ಜೀವಿಸುವ ಅಪೂರ್ವ ಅವಕಾಶ. ಬಡತನ, ಹಸಿವು, ನಿರುದ್ಯೋಗ ಇವುಗಳಿಗೆ ಜಾತಿ ಧರ್ಮಗಳಿಲ್ಲ. ಈ ತಿಂಗಳು ಜಾತಿಭೇದವಿಲ್ಲದೇ ಬಡವರಿಗೆ ಅನ್ನ ನೀಡಿ, ಹಸಿವನ್ನು ನೀಗಿಸಿ, ಶೀರ್ ಕುರ್ಮಾ ತಿನ್ನಿಸಿ, ಜೀವನೋಪಾಯವನ್ನು ಕಲ್ಪಿಸಿ. ಈ ತಿಂಗಳ ಎಲ್ಲ ವಿಶೇಷ ಆಚರಣೆಗಳಲ್ಲಿ, ಮಸೀದಿಗಳ ಒಳಭಾಗದ ದರ್ಶನಕ್ಕಾಗಿ ನೆರೆಹೊರೆಯ ದೇಶಬಾಂಧವರನ್ನು ಆಹ್ವಾನಿಸಿ. ಮಸೀದಿಯೂ ಈ ದೇಶದ ಸಂವಿಧಾನ ನೀಡಿದ ಹಕ್ಕುಗಳಲ್ಲಿ ಒಂದು ಎಂಬುದನ್ನು ಪ್ರತಿಪಾದಿಸಲು, ಮಸೀದಿಯಲ್ಲಿ ಸಂವಿಧಾನದ ಪ್ರಸ್ತಾವನೆಯ ಭಿತ್ತಿಚಿತ್ರವನ್ನು ಹಾಕಿ.