ಬಸವಣ್ಣ ಹನ್ನೆರಡನೇ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿ ಮಾಡಿದ ಸಮಾಜ ಸುಧಾರಕ. ಆಡುಕನ್ನಡವನ್ನು ಬರಹದಲ್ಲಿ ತಂದು ಕನ್ನಡ ಭಾಷೆಗೆ ಜನಪದ ಸೊಗಡು ಕೊಟ್ಟವರು ಅವರು. ಆದರೆ ಇತ್ತೀಚೆಗೆ ಬೆಂಗಳೂರಿನ ಅವರ ಪ್ರತಿಮೆಯೊಂದರ ಅಡಿಯಲ್ಲಿ ಬಸವಣ್ಣನವರ ಸಂದೇಶಗಳನ್ನು ಕನ್ನಡ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಬರೆಸಲಾಗಿತ್ತು. ‘ಇಲ್ಲಿ ಹಿಂದಿ ಏಕೆ’ ಎಂದು ಕೆಲವು ಕನ್ನಡ ಪ್ರೇಮಿಗಳು ಬೇಸರಿಸಿದ್ದರಿಂದ, ಅದಕ್ಕೆ ಮಣಿದು ಹಿಂದಿಯನ್ನು ಬಣ್ಣದಲ್ಲಿ ಅಳಿಸಿರುವುದು ವಿಷಾದದ ಸಂಗತಿ.