ಹೊಸ ನಿಗಮ, ಪ್ರಾಧಿಕಾರಗಳ ರಚನೆಯ ಬಗ್ಗೆ ಪರ– ವಿರೋಧದ ಚರ್ಚೆಗಳು ನಡೆಯುತ್ತಿವೆ. ಓಲೈಕೆ ರಾಜಕೀಯವನ್ನು ನಿಲ್ಲಿಸಿ, ಬಹುತ್ವ ಭಾರತದ ಕೌಶಲಗಳನ್ನು ಕೇಂದ್ರೀಕರಿಸಿ ನಿಗಮ, ಪ್ರಾಧಿಕಾರಗಳನ್ನು ರಚಿಸಿದರೆ ಸಮಾಜಮುಖಿಯಾದೀತು. ಶರಣರ ಸದಾಶಯದ ಕಾಯಕ, ಕೌಶಲಗಳನ್ನು ಆಧರಿಸಿ ಪ್ರಾಧಿಕಾರ, ನಿಗಮಗಳನ್ನು ರಚಿಸುವಂತಾಗಲಿ.