ಮಕ್ಕಳ ಮೇಲೆ ತಮಗೆ ಸಂಪೂರ್ಣ ಹಕ್ಕಿದೆ, ಅವರನ್ನು ಏನು ಬೇಕಾದರೂ ಮಾಡಬಹುದು ಎಂದು ತಂದೆ-ತಾಯಿ ತಪ್ಪಾಗಿ ತಿಳಿದಿರುವುದೇ ಇಂಥ ದುರಂತಗಳಿಗೆ ಕಾರಣ. ಮಕ್ಕಳು ಸಮಾಜದ ಆಸ್ತಿ. ಅವರನ್ನು ಸತ್ಪ್ರಜೆಗಳನ್ನಾಗಿ ಬೆಳೆಸುವುದು ಹಾಗೂ ಅವರು ಸಮಾಜದಲ್ಲಿ ನೆಮ್ಮದಿಯಿಂದ ಬದುಕಲು ಬೇಕಾದ ಸೌಕರ್ಯಗಳನ್ನು ಒದಗಿಸುವುದು ತಂದೆ ತಾಯಿಯ ಆದ್ಯ ಕರ್ತವ್ಯ. ಅದನ್ನು ನಿರ್ವಹಿಸದೆ, ಯಾವುದೇ ಅಪರಾಧ ಮಾಡಿರದ ಆ ಕಂದಮ್ಮಗಳನ್ನು ಸಾಯಿಸುವುದು ಅಕ್ಷಮ್ಯ ಅಪರಾಧ, ಕ್ರೌರ್ಯದ ಪರಮಾವಧಿ.
-ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ,ಬೆಂಗಳೂರು