ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧ, ಪ್ರೇಮ, ಚುನಾವಣೆ

Last Updated 14 ಏಪ್ರಿಲ್ 2019, 18:35 IST
ಅಕ್ಷರ ಗಾತ್ರ

ಯುದ್ಧ ಮತ್ತು ಪ್ರೇಮದಲ್ಲಿ ಎಲ್ಲವೂ ಸರಿ ಎಂಬ ಗಾದೆ ಮಾತಿನಲ್ಲಿ ಈಗ ‘ಚುನಾವಣೆ’ ಎಂಬ ಪದವನ್ನೂ ಸೇರಿಸಬಹುದಾಗಿದೆ. ಇಲ್ಲಿ ಗೆಲುವೇ ಮುಖ್ಯ. ಗೆಲುವಿನ ದಾರಿಗಳು ನಗಣ್ಯ.

ನಮ್ಮ ರಾಜಕೀಯ ನೇತಾರರ ಪ್ರಚಾರ ವೈಖರಿ, ಅವರು ಬಳಸುವ ಭಾಷೆ, ಕಾರುವ ದ್ವೇಷ, ಅಸೂಯೆ, ಅಧಿಕಾರ ದಾಹ ಹೇಳಿದಷ್ಟೂ ಅಸಹ್ಯಕರ. ಇವರು ಸಾರ್ವಜನಿಕ ಜೀವನದ ನ್ಯೆತಿಕ ನೆಲೆಗಟ್ಟನ್ನೇ ಹಾಳು ಮಾಡಿದ್ದಾರೆ.

ಜನರ ದಾರಿ ತಪ್ಪಿಸಿ, ಎಲ್ಲ ವಾಮ ಮಾರ್ಗಗಳನ್ನೂ ಬಳಸಿ ಗದ್ದುಗೆ ಏರಲು ಹವಣಿಸುತ್ತಿದ್ದಾರೆ. ತತ್ವವಿಲ್ಲದ ರಾಜಕೀಯ,ಏಳು ಮಹಾಪಾಪಗಳಲ್ಲಿ ಒಂದು ಎಂದು ಗಾಂಧೀಜಿ ಪ್ರತಿಪಾದಿಸಿದ್ದರು. ತಾತ್ವಿಕ ನಡೆ-ನುಡಿ ಇಂದು ಯಾರಿಗೆ ಬೇಕಾಗಿದೆ? ಈ ಬಗ್ಗೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
-ವೆಂಕಟೇಶ ಮಾಚಕನೂರ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT