ರಾಜ್ಯದ ಆಯ್ದ 75 ಸರ್ಕಾರಿ ಶಾಲೆಗಳನ್ನು ‘ನೇತಾಜಿ ಅಮೃತ ಶಾಲೆಗಳು’ ಎಂದು ಘೋಷಿಸಿ, ಈ ಶಾಲೆಗಳಲ್ಲಿ ಎನ್ಸಿಸಿ ಘಟಕಗಳನ್ನು ಸ್ಥಾಪಿಸುವ ಸರ್ಕಾರದ ನಿರ್ಧಾರ (ಪ್ರ.ವಾ., ಜ. 26) ಸ್ವಾಗತಾರ್ಹ. ಆದರೆ ಈ ಯೋಜನೆಯು ವಿದ್ಯಾರ್ಥಿಗಳಿಗೆ ಉಪಯೋಗಕ್ಕೆ ಬರುವಂತೆ ಆಗಬೇಕು. ನಾನು ಮಾಧ್ಯಮಿಕ ಶಾಲೆಯಿಂದ ಪದವಿವರೆಗೂ ಎನ್ಸಿಸಿ ತರಬೇತಿ ಪಡೆದೆ. ಆದರೆ ಸೈನಿಕ ಹುದ್ದೆಗೆಂದು ಸಂದರ್ಶನಕ್ಕೆ ಹೋದಾಗ ಎನ್ಸಿಸಿ ಪ್ರಮಾಣಪತ್ರವನ್ನು ಹತ್ತಿರ ಕೂಡ ಸೇರಿಸಲಿಲ್ಲ. ಇಂತಹ ತರಬೇತಿಯು ಉಪಯೋಗಕ್ಕೆ ಬಾರದಿದ್ದರೆ ಯಾವ ಮಹತ್ಸಾಧನೆಗಾಗಿ ಅದಕ್ಕೆ ಕೋಟ್ಯಂತರ ರೂಪಾಯಿ ವ್ಯಯಿಸಬೇಕು?