ಇದುವರೆಗೂ ಸುಮಾರು ಒಂದೂವರೆ ಕೋಟಿ ಜನರಿಗೆ ವ್ಯಾಕ್ಸಿನ್ ಹಾಕಿರುವುದರಿಂದ ಅದನ್ನು ತೆಗೆದುಕೊಂಡವರ ಆರೋಗ್ಯದ ಕುರಿತು ರಾಜ್ಯವಾರು ಮಾಹಿತಿ ಪ್ರಕಟಿಸಿದರೆ ಅದು ಖಂಡಿತ ಜನರಿಗೆ ವ್ಯಾಕ್ಸಿನ್ ಪರಿಣಾಮದ ಬಗ್ಗೆ ಸ್ಪಷ್ಟ ಚಿತ್ರಣ ನೀಡಬಹುದು. ಆತಂಕ ನಿವಾರಣೆಯಾದರೆ ಜನ ತಾವಾಗಿಯೇ ಲಸಿಕೆ ಪಡೆಯಲು ಮುಂದಾಗುತ್ತಾರೆ. ಆಗ,ವ್ಯಾಕ್ಸಿನ್ಗಾಗಿ ನೂಕುನುಗ್ಗಲು ಉಂಟಾಗಬಹುದು. ಪರಿಣಾಮವಾಗಿ, ಅವ್ಯವಸ್ಥೆ ಮತ್ತು ಕೃತಕ ಅಭಾವ, ಕಾಳಸಂತೆ ಎಲ್ಲವೂ ತಲೆ ಎತ್ತಬಹುದು. ಸರ್ಕಾರ ಇದರ ಬಗ್ಗೆಯೂ ಈಗಲೇ ಯೋಚಿಸಿ ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.