ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಒಂದೇ ಬಾರಿ ಎರಡು ಪ್ರಮುಖ ಕಾರ್ಯಕ್ರಮ ಸರಿಯೇ?

ಅಕ್ಷರ ಗಾತ್ರ

ಜನವರಿ 6, 7 ಮತ್ತು 8ರಂದು ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಿಕ್ಕಿಯಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ನಾವೂ ಆಗಲೇ ಮಾಡಿ ತೀರುತ್ತೇವೆ ಎಂಬಂತೆ ಶಿವಮೊಗ್ಗದಲ್ಲಿ ಜನವರಿ 7, 8 ಮತ್ತು 9ರಂದು ಶಿಕ್ಷಣ ಇಲಾಖೆ ‘ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ’ ಕಾರ್ಯಕ್ರಮವನ್ನು ಆಯೋಜಿಸಿದೆ. ಸುಮಾರು 1,300 ಮಕ್ಕಳು, ಸಾವಿರಾರು ಶಿಕ್ಷಕರು, ಸುಮಾರು ಇನ್ನೂರು ಜನ ತೀರ್ಪುಗಾರರು, ಸಾವಿರಾರು ಪೋಷಕರು, ಪ್ರತಿನಿಧಿಗಳು ಭಾಗವಹಿಸುವ ರಾಜ್ಯ ಮಟ್ಟದ ಕಾರ್ಯಕ್ರಮ ಇದು. ಹೆಚ್ಚು ಕಡಿಮೆ ಐದು ಸಾವಿರ ಜನ ಸೇರುವ ನಿರೀಕ್ಷೆ ಇದೆ.

ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಆಸೆ ಇರುವ ಮಕ್ಕಳು, ಪೋಷಕರು, ಶಿಕ್ಷಕರಿಗೆ ಇದರಿಂದ ನಷ್ಟವಾಗುವುದಿಲ್ಲವೇ? ಈ ಎರಡರಲ್ಲಿ ಯಾವುದಾದರೂ ಒಂದರ ದಿನಾಂಕ ಬದಲಿಸುವ ಅಗತ್ಯವಿದೆ. ಸಂಬಂಧಪಟ್ಟವರು ಈ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು.

ಸೌಮ್ಯ ಸಿ.,ಹಿರೇಕೆರೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT