ಜನವರಿ 6, 7 ಮತ್ತು 8ರಂದು ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಿಕ್ಕಿಯಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ನಾವೂ ಆಗಲೇ ಮಾಡಿ ತೀರುತ್ತೇವೆ ಎಂಬಂತೆ ಶಿವಮೊಗ್ಗದಲ್ಲಿ ಜನವರಿ 7, 8 ಮತ್ತು 9ರಂದು ಶಿಕ್ಷಣ ಇಲಾಖೆ ‘ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ’ ಕಾರ್ಯಕ್ರಮವನ್ನು ಆಯೋಜಿಸಿದೆ. ಸುಮಾರು 1,300 ಮಕ್ಕಳು, ಸಾವಿರಾರು ಶಿಕ್ಷಕರು, ಸುಮಾರು ಇನ್ನೂರು ಜನ ತೀರ್ಪುಗಾರರು, ಸಾವಿರಾರು ಪೋಷಕರು, ಪ್ರತಿನಿಧಿಗಳು ಭಾಗವಹಿಸುವ ರಾಜ್ಯ ಮಟ್ಟದ ಕಾರ್ಯಕ್ರಮ ಇದು. ಹೆಚ್ಚು ಕಡಿಮೆ ಐದು ಸಾವಿರ ಜನ ಸೇರುವ ನಿರೀಕ್ಷೆ ಇದೆ.