ನಮ್ಮ ವಿಧಾನಸೌಧವು ರಾಜ್ಯದ ಹಿರಿಮೆ– ಗರಿಮೆಗಳನ್ನು ಹೆಚ್ಚಿಸುವ ನಿರ್ಮಾಣಗಳಲ್ಲಿ ಒಂದು. ಅದರ ನಿರ್ವಹಣೆ ಸರ್ಕಾರದ ಜವಾಬ್ದಾರಿ. ಆದರೆ ಇತ್ತೀಚಿನ ಬೆಳವಣಿಗೆಗಳು ಜನರಲ್ಲಿ ಆತಂಕ ಮೂಡಿಸುತ್ತಿವೆ. ಐದು ವರ್ಷದ ಅವಧಿಗೆ ಆಯ್ಕೆಯಾದ ಶಾಸಕರು ಸಚಿವರಾಗಿ ಜನರ ತೆರಿಗೆಯ ಹಣವನ್ನು ಮನಸೋ ಇಚ್ಛೆ ಬಳಸಿಕೊಂಡು ತಮಗೆ ನೀಡುವ ಕೊಠಡಿಗಳ ನವೀಕರಣ ಮಾಡಿಸುವುದು ಅಗತ್ಯವೇ? ಇದರಿಂದ ಹಣ ಪೋಲಾಗುವುದಲ್ಲದೆ ಕಟ್ಟಡಕ್ಕೂ ಹಾನಿಯಾಗುತ್ತದೆ.