<p>ಪರಿಶಿಷ್ಟ ಜಾತಿಗಳು ‘ಏಕಸ್ವರೂಪಿ’ ಸಮುದಾಯವೇ ಎಂದು ವಾದಿರಾಜ್ ಅವರು ಕೇಳಿದ್ದಾರೆ (ಪ್ರ.ವಾ., ಸೆ. 9).<br />ಮಾನವಶಾಸ್ತ್ರೀಯ ನೆಲೆಯಿಂದ ಯಾವ ಸಮುದಾಯವೂ ಏಕಸ್ವರೂಪದಲ್ಲಿ ಇರುವುದಿಲ್ಲ...! ‘ಮೀಸಲಾತಿ ನೀತಿ’ ಬರೀ ಮಾನವಶಾಸ್ತ್ರೀಯ ವಿಶ್ಲೇಷಣೆ ಆಧರಿಸಿಲ್ಲ. ಬದಲಾಗಿ, ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ<br />ಸ್ಥಿತಿಗತಿಯನ್ನು ಆಧರಿಸಿದೆ. ‘ಮೀಸಲು ನೀತಿ’ಯಲ್ಲಿ ಖಂಡಿತ ಬದಲಾವಣೆ ಆಗಬೇಕು. ಆ ಬದಲಾವಣೆಗೆ ಮೊದಲು, ಜನಸಂಖ್ಯೆಗೆ ಅನುಗುಣವಾಗಿ ಮೀಸಲು ನೀತಿ ಜಾರಿಯಾಗಬೇಕು. ಮುಖ್ಯವಾಗಿ, ಖಾಸಗಿ ವಲಯಗಳಿಗೆ ಮೀಸಲಾತಿಯನ್ನು ವಿಸ್ತರಿಸಬೇಕು ಎಂಬ ದಿಕ್ಕಿನಿಂದ ಆರಂಭವಾಗಬೇಕು. ಇದಕ್ಕೆ ಪೂರಕವಾಗಿ ಸಾಂವಿಧಾನಿಕ ತಿದ್ದುಪಡಿಯ ಬೇಡಿಕೆ ನಮ್ಮ ಆದ್ಯತೆಯಾಗಬೇಕು. ಈ ಬದಲಾವಣೆ ಆದಾಗ ‘ಪೂಲ್ ಆಫ್ ಆಪರ್ಚುನಿಟಿ’ ಸೃಷ್ಟಿ ಆಗುತ್ತದೆ. ಆಗ ಒಳಮೀಸಲಾತಿ ಕುರಿತ ಚರ್ಚೆಯು ರಚನಾತ್ಮಕ ಮತ್ತು ಇನ್ಕ್ಲೂಸಿವ್ ಸ್ವರೂಪ ಹೊಂದುತ್ತದೆ.</p>.<p>ಲೇಖಕರ ವಾದವನ್ನೇ ಆಧರಿಸಿ ವಾದಿಸುವುದಾದರೆ, ಆರ್ಥಿಕ ಮಾನದಂಡದ ಆಧಾರದ ಮೇಲೆ ಕೊಟ್ಟಿರುವ<br />ಶೇ 10ರಷ್ಟು ಮೀಸಲಾತಿ ಅಡಿಯಲ್ಲಿ ಬರುವ ಎಲ್ಲಾ ಜಾತಿಗಳು ಏಕಸ್ವರೂಪದಲ್ಲಿ ಇರಲು ಸಾಧ್ಯವಿಲ್ಲ. ಮೇಲಾಗಿ, ಈಗ ಅವರಿಗೆ ಕೊಟ್ಟಿರುವ ಮೀಸಲಾತಿ ‘ಆರ್ಥಿಕ ಹಿನ್ನಡೆ’ಯ ಕಾರಣಕ್ಕಾಗಿಯೇ ವಿನಾ ಮಾನವಶಾಸ್ತ್ರೀಯ ವಿಶ್ಲೇಷಣೆಯ ಕಾರಣಕ್ಕಲ್ಲ. ಲೇಖಕರು ಇದೇ ತರ್ಕ ಬಳಸಿ ಆ ವಿಷಯದಲ್ಲಿಯೂ ಒಳಮೀಸಲಾತಿ ಒದಗಿಸಬೇಕು ಎಂಬ ವಾದವನ್ನು ಮಂಡಿಸಲು ತಯಾರಿದ್ದಾರೆಯೇ ಎಂಬ ಪ್ರಶ್ನೆ ಇಲ್ಲಿ ಮುಖ್ಯವಾಗುತ್ತದೆ.</p>.<p><strong>-ಡಾ. ಕಿರಣ್ ಎಂ. ಗಾಜನೂರು,ಕಲಬುರ್ಗಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪರಿಶಿಷ್ಟ ಜಾತಿಗಳು ‘ಏಕಸ್ವರೂಪಿ’ ಸಮುದಾಯವೇ ಎಂದು ವಾದಿರಾಜ್ ಅವರು ಕೇಳಿದ್ದಾರೆ (ಪ್ರ.ವಾ., ಸೆ. 9).<br />ಮಾನವಶಾಸ್ತ್ರೀಯ ನೆಲೆಯಿಂದ ಯಾವ ಸಮುದಾಯವೂ ಏಕಸ್ವರೂಪದಲ್ಲಿ ಇರುವುದಿಲ್ಲ...! ‘ಮೀಸಲಾತಿ ನೀತಿ’ ಬರೀ ಮಾನವಶಾಸ್ತ್ರೀಯ ವಿಶ್ಲೇಷಣೆ ಆಧರಿಸಿಲ್ಲ. ಬದಲಾಗಿ, ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ<br />ಸ್ಥಿತಿಗತಿಯನ್ನು ಆಧರಿಸಿದೆ. ‘ಮೀಸಲು ನೀತಿ’ಯಲ್ಲಿ ಖಂಡಿತ ಬದಲಾವಣೆ ಆಗಬೇಕು. ಆ ಬದಲಾವಣೆಗೆ ಮೊದಲು, ಜನಸಂಖ್ಯೆಗೆ ಅನುಗುಣವಾಗಿ ಮೀಸಲು ನೀತಿ ಜಾರಿಯಾಗಬೇಕು. ಮುಖ್ಯವಾಗಿ, ಖಾಸಗಿ ವಲಯಗಳಿಗೆ ಮೀಸಲಾತಿಯನ್ನು ವಿಸ್ತರಿಸಬೇಕು ಎಂಬ ದಿಕ್ಕಿನಿಂದ ಆರಂಭವಾಗಬೇಕು. ಇದಕ್ಕೆ ಪೂರಕವಾಗಿ ಸಾಂವಿಧಾನಿಕ ತಿದ್ದುಪಡಿಯ ಬೇಡಿಕೆ ನಮ್ಮ ಆದ್ಯತೆಯಾಗಬೇಕು. ಈ ಬದಲಾವಣೆ ಆದಾಗ ‘ಪೂಲ್ ಆಫ್ ಆಪರ್ಚುನಿಟಿ’ ಸೃಷ್ಟಿ ಆಗುತ್ತದೆ. ಆಗ ಒಳಮೀಸಲಾತಿ ಕುರಿತ ಚರ್ಚೆಯು ರಚನಾತ್ಮಕ ಮತ್ತು ಇನ್ಕ್ಲೂಸಿವ್ ಸ್ವರೂಪ ಹೊಂದುತ್ತದೆ.</p>.<p>ಲೇಖಕರ ವಾದವನ್ನೇ ಆಧರಿಸಿ ವಾದಿಸುವುದಾದರೆ, ಆರ್ಥಿಕ ಮಾನದಂಡದ ಆಧಾರದ ಮೇಲೆ ಕೊಟ್ಟಿರುವ<br />ಶೇ 10ರಷ್ಟು ಮೀಸಲಾತಿ ಅಡಿಯಲ್ಲಿ ಬರುವ ಎಲ್ಲಾ ಜಾತಿಗಳು ಏಕಸ್ವರೂಪದಲ್ಲಿ ಇರಲು ಸಾಧ್ಯವಿಲ್ಲ. ಮೇಲಾಗಿ, ಈಗ ಅವರಿಗೆ ಕೊಟ್ಟಿರುವ ಮೀಸಲಾತಿ ‘ಆರ್ಥಿಕ ಹಿನ್ನಡೆ’ಯ ಕಾರಣಕ್ಕಾಗಿಯೇ ವಿನಾ ಮಾನವಶಾಸ್ತ್ರೀಯ ವಿಶ್ಲೇಷಣೆಯ ಕಾರಣಕ್ಕಲ್ಲ. ಲೇಖಕರು ಇದೇ ತರ್ಕ ಬಳಸಿ ಆ ವಿಷಯದಲ್ಲಿಯೂ ಒಳಮೀಸಲಾತಿ ಒದಗಿಸಬೇಕು ಎಂಬ ವಾದವನ್ನು ಮಂಡಿಸಲು ತಯಾರಿದ್ದಾರೆಯೇ ಎಂಬ ಪ್ರಶ್ನೆ ಇಲ್ಲಿ ಮುಖ್ಯವಾಗುತ್ತದೆ.</p>.<p><strong>-ಡಾ. ಕಿರಣ್ ಎಂ. ಗಾಜನೂರು,ಕಲಬುರ್ಗಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>