ಪರಿಶಿಷ್ಟ ಜಾತಿಗಳು ‘ಏಕಸ್ವರೂಪಿ’ ಸಮುದಾಯವೇ ಎಂದು ವಾದಿರಾಜ್ ಅವರು ಕೇಳಿದ್ದಾರೆ (ಪ್ರ.ವಾ., ಸೆ. 9).
ಮಾನವಶಾಸ್ತ್ರೀಯ ನೆಲೆಯಿಂದ ಯಾವ ಸಮುದಾಯವೂ ಏಕಸ್ವರೂಪದಲ್ಲಿ ಇರುವುದಿಲ್ಲ...! ‘ಮೀಸಲಾತಿ ನೀತಿ’ ಬರೀ ಮಾನವಶಾಸ್ತ್ರೀಯ ವಿಶ್ಲೇಷಣೆ ಆಧರಿಸಿಲ್ಲ. ಬದಲಾಗಿ, ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ
ಸ್ಥಿತಿಗತಿಯನ್ನು ಆಧರಿಸಿದೆ. ‘ಮೀಸಲು ನೀತಿ’ಯಲ್ಲಿ ಖಂಡಿತ ಬದಲಾವಣೆ ಆಗಬೇಕು. ಆ ಬದಲಾವಣೆಗೆ ಮೊದಲು, ಜನಸಂಖ್ಯೆಗೆ ಅನುಗುಣವಾಗಿ ಮೀಸಲು ನೀತಿ ಜಾರಿಯಾಗಬೇಕು. ಮುಖ್ಯವಾಗಿ, ಖಾಸಗಿ ವಲಯಗಳಿಗೆ ಮೀಸಲಾತಿಯನ್ನು ವಿಸ್ತರಿಸಬೇಕು ಎಂಬ ದಿಕ್ಕಿನಿಂದ ಆರಂಭವಾಗಬೇಕು. ಇದಕ್ಕೆ ಪೂರಕವಾಗಿ ಸಾಂವಿಧಾನಿಕ ತಿದ್ದುಪಡಿಯ ಬೇಡಿಕೆ ನಮ್ಮ ಆದ್ಯತೆಯಾಗಬೇಕು. ಈ ಬದಲಾವಣೆ ಆದಾಗ ‘ಪೂಲ್ ಆಫ್ ಆಪರ್ಚುನಿಟಿ’ ಸೃಷ್ಟಿ ಆಗುತ್ತದೆ. ಆಗ ಒಳಮೀಸಲಾತಿ ಕುರಿತ ಚರ್ಚೆಯು ರಚನಾತ್ಮಕ ಮತ್ತು ಇನ್ಕ್ಲೂಸಿವ್ ಸ್ವರೂಪ ಹೊಂದುತ್ತದೆ.