<p>ವಸುಧೇಂದ್ರ ಅವರ ‘ನೈತಿಕತೆಗೆ ಕಳಂಕ’ ಪತ್ರಕ್ಕೆ (ವಾ.ವಾ., ಜುಲೈ 23) ಈ ಪ್ರತಿಕ್ರಿಯೆ. ಬೇರೆ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡು ಪ್ರಕಟವಾಗುತ್ತಿರುವ ಉತ್ತಮ ಕೃತಿಗಳು ಜನಮಾನಸವನ್ನು ಸೆಳೆಯುತ್ತಿವೆ. ಆದರೆ ಸತ್ವಹೀನ ವಿಷಯಗಳಾಗಿದ್ದರೂ ‘ಭಾಷಾ ಗಿಮಿಕ್’ ಮಾಡುತ್ತಾ ಕನ್ನಡಿಗರ ಮನ ಸೆಳೆದಿದ್ದ ಕೆಲವು ಲೇಖಕರಲ್ಲಿ ಅನ್ಯ ಭಾಷೆಯಿಂದ ಬರುತ್ತಿರುವ ಉತ್ತಮ ಕೃತಿಗಳು ಕಳವಳ ಉಂಟುಮಾಡುತ್ತಿವೆ ಎಂದೆನಿಸುತ್ತಿದೆ.</p>.<p>ಯಾವುದೇ ಕೃತಿಯನ್ನು ಭಾಷಾಂತರ ಮಾಡುವಾಗ, ಕೃತಿಸ್ವಾಮ್ಯ ಪಡೆದವರಿಂದ ಪೂರ್ವಾನುಮತಿ ಪಡೆಯಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ದೇಶದಲ್ಲಿ ಸೌಹಾರ್ದ ಸ್ಥಾಪಿಸಲು ಸಹಾಯ ಮಾಡುವ ಕೃತಿಗಳ ಅನುವಾದಕ್ಕೆ ಮೂಲ ಲೇಖಕರ ಅನುಮತಿಗಾಗಿ ಕಾಯುತ್ತ ಕೂಡುವುದು, ಆ ಕೃತಿಯ ಪ್ರಸ್ತುತತೆ ಹೊಸಕಿ ಹಾಕಬಲ್ಲದು. ತುರ್ತು ಸಂದರ್ಭದಲ್ಲಿ ಎಷ್ಟೋ ಸಲ ವಿಧ್ಯುಕ್ತತೆಯನ್ನು ಬದಿಗಿಟ್ಟು ಪ್ರಮುಖ ವಿಚಾರಗಳನ್ನು ಜನರಿಗೆ ತಲುಪಿಸುವ ಕೆಲಸವು ಸಮಾಜದ ಒಳಿತಿನ ದೃಷ್ಟಿಯಿಂದ ಬಹು ಮುಖ್ಯವಾಗಿರುತ್ತದೆ.</p>.<p>ಸಾಹಿತ್ಯ ಮತ್ತು ಪ್ರಖರ ವಿಚಾರಗಳನ್ನು ಮಾರಾಟದ ಸರಕಾಗಿಸುವುದು ಸಲ್ಲದು. ಮಹತ್ವದ ಕೃತಿಯನ್ನು ಮಾನವ ಕುಲಕೋಟಿಗೆ ತಲುಪಿಸುವ ಕೆಲಸವು ಲೇಖಕನಿಗೆ ಮತ್ತು ಆ ಮೂಲಕ ಜನರಿಗೆ ಸಲ್ಲಿಸುವ ಉದಾರ ಮತ್ತು ಉಚಿತ ಸೇವೆಯೆಂದೇ ಪ್ರಕಾಶಕರು ಭಾವಿಸಬೇಕು. ಕನ್ನಡದಲ್ಲಿ ಓದುಗರ ಸಂಖ್ಯೆಯೇ ಕ್ಷೀಣಿಸುತ್ತಿರುವಾಗ, ನಾವು- ಪ್ರಕಾಶಕರು ಕೊಟ್ಯಧೀಶರಾಗಲು ಹವಣಿಸುತ್ತಿಲ್ಲ.</p>.<p>ಈಗಾಗಲೇ ಅನೇಕ ಪ್ರಕಾಶನ ಸಂಸ್ಥೆಗಳು ಮುಚ್ಚಿಹೋಗಿವೆ. ಕೆಲವು ಅವಸಾನದ ಅಂಚಿಗೆ ಬಂದು ನಿಂತಿವೆ ಎಂಬುದನ್ನು ಗಮನಿಸಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಸುಧೇಂದ್ರ ಅವರ ‘ನೈತಿಕತೆಗೆ ಕಳಂಕ’ ಪತ್ರಕ್ಕೆ (ವಾ.ವಾ., ಜುಲೈ 23) ಈ ಪ್ರತಿಕ್ರಿಯೆ. ಬೇರೆ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡು ಪ್ರಕಟವಾಗುತ್ತಿರುವ ಉತ್ತಮ ಕೃತಿಗಳು ಜನಮಾನಸವನ್ನು ಸೆಳೆಯುತ್ತಿವೆ. ಆದರೆ ಸತ್ವಹೀನ ವಿಷಯಗಳಾಗಿದ್ದರೂ ‘ಭಾಷಾ ಗಿಮಿಕ್’ ಮಾಡುತ್ತಾ ಕನ್ನಡಿಗರ ಮನ ಸೆಳೆದಿದ್ದ ಕೆಲವು ಲೇಖಕರಲ್ಲಿ ಅನ್ಯ ಭಾಷೆಯಿಂದ ಬರುತ್ತಿರುವ ಉತ್ತಮ ಕೃತಿಗಳು ಕಳವಳ ಉಂಟುಮಾಡುತ್ತಿವೆ ಎಂದೆನಿಸುತ್ತಿದೆ.</p>.<p>ಯಾವುದೇ ಕೃತಿಯನ್ನು ಭಾಷಾಂತರ ಮಾಡುವಾಗ, ಕೃತಿಸ್ವಾಮ್ಯ ಪಡೆದವರಿಂದ ಪೂರ್ವಾನುಮತಿ ಪಡೆಯಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ದೇಶದಲ್ಲಿ ಸೌಹಾರ್ದ ಸ್ಥಾಪಿಸಲು ಸಹಾಯ ಮಾಡುವ ಕೃತಿಗಳ ಅನುವಾದಕ್ಕೆ ಮೂಲ ಲೇಖಕರ ಅನುಮತಿಗಾಗಿ ಕಾಯುತ್ತ ಕೂಡುವುದು, ಆ ಕೃತಿಯ ಪ್ರಸ್ತುತತೆ ಹೊಸಕಿ ಹಾಕಬಲ್ಲದು. ತುರ್ತು ಸಂದರ್ಭದಲ್ಲಿ ಎಷ್ಟೋ ಸಲ ವಿಧ್ಯುಕ್ತತೆಯನ್ನು ಬದಿಗಿಟ್ಟು ಪ್ರಮುಖ ವಿಚಾರಗಳನ್ನು ಜನರಿಗೆ ತಲುಪಿಸುವ ಕೆಲಸವು ಸಮಾಜದ ಒಳಿತಿನ ದೃಷ್ಟಿಯಿಂದ ಬಹು ಮುಖ್ಯವಾಗಿರುತ್ತದೆ.</p>.<p>ಸಾಹಿತ್ಯ ಮತ್ತು ಪ್ರಖರ ವಿಚಾರಗಳನ್ನು ಮಾರಾಟದ ಸರಕಾಗಿಸುವುದು ಸಲ್ಲದು. ಮಹತ್ವದ ಕೃತಿಯನ್ನು ಮಾನವ ಕುಲಕೋಟಿಗೆ ತಲುಪಿಸುವ ಕೆಲಸವು ಲೇಖಕನಿಗೆ ಮತ್ತು ಆ ಮೂಲಕ ಜನರಿಗೆ ಸಲ್ಲಿಸುವ ಉದಾರ ಮತ್ತು ಉಚಿತ ಸೇವೆಯೆಂದೇ ಪ್ರಕಾಶಕರು ಭಾವಿಸಬೇಕು. ಕನ್ನಡದಲ್ಲಿ ಓದುಗರ ಸಂಖ್ಯೆಯೇ ಕ್ಷೀಣಿಸುತ್ತಿರುವಾಗ, ನಾವು- ಪ್ರಕಾಶಕರು ಕೊಟ್ಯಧೀಶರಾಗಲು ಹವಣಿಸುತ್ತಿಲ್ಲ.</p>.<p>ಈಗಾಗಲೇ ಅನೇಕ ಪ್ರಕಾಶನ ಸಂಸ್ಥೆಗಳು ಮುಚ್ಚಿಹೋಗಿವೆ. ಕೆಲವು ಅವಸಾನದ ಅಂಚಿಗೆ ಬಂದು ನಿಂತಿವೆ ಎಂಬುದನ್ನು ಗಮನಿಸಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>