ಆಸ್ತಿ ಖರೀದಿ ಹಾಗೂ ಇತರ ವಿಷಯಗಳಿಗೆ ಸಂಬಂಧಪಟ್ಟಂತೆ ಇ.ಸಿ ಪಡೆಯಲು ಈವರೆಗೆ ಉಪ ನೋಂದಣಾಧಿಕಾರಿ ಕಚೇರಿಗೆ ಅರ್ಜಿ ಕೊಟ್ಟು ವಾರಗಟ್ಟಲೆ ಅಲೆಯಬೇಕಾಗಿತ್ತು. ಇಂತಹ ಅಲೆದಾಟವನ್ನು ತಪ್ಪಿಸಲು ಮುಂದಾಗಿರುವ ಕಂದಾಯ ಸಚಿವ ಆರ್.ಅಶೋಕ ಅವರಿಗೆ ಧನ್ಯವಾದ. ಅಧಿಕಾರಿಗಳು ಇದಕ್ಕೆ ಸ್ಪಂದಿಸಿ, ಜನಸಾಮಾನ್ಯರ ಬವಣೆ ತಪ್ಪಿಸಲು ಅವಕಾಶ ಮಾಡಿಕೊಡಲಿ.