ಬೆಂಗಳೂರಿನ ಅಂಚಿನಲ್ಲಿರುವ ರೋರಿಕ್ ಎಸ್ಟೇಟನ್ನು ‘ಫಿಲ್ಮ್ ಸಿಟಿ’ ಮಾಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಈ ನಗರ ತನ್ನ ಸಹಜ ಚೆಲುವು, ತಣ್ಣನೆಯ ಹವಾಮಾನ, ನೈಸರ್ಗಿಕ ಭದ್ರತೆಯಿಂದಾಗಿ ಜನಕೋಟಿಯನ್ನು ಆಕರ್ಷಿಸಿಕೊಂಡು ಈಗಾಗಲೇ ಹೊರಲಾರದ ಹೊರೆ ಹೊತ್ತಿದೆ. ಧಾರಣಶಕ್ತಿಯನ್ನು ಕಳೆದುಕೊಂಡಿದೆ. ಫಿಲ್ಮ್ ಸಿಟಿಯನ್ನು ನಿರ್ಮಿಸಿದರೆ ವಾಹನ ದಟ್ಟಣೆ, ಪ್ರವಾಸಿಗರ ದಂಡು, ನೀರಿಗಾಗಿ ಬೇಡಿಕೆ, ತ್ಯಾಜ್ಯದ ರಾಶಿ, ವನ್ಯಜೀವಿಗಳ ಸಂಕಷ್ಟ ಎಲ್ಲವೂ ಹೆಚ್ಚಲಿವೆ. ಇಷ್ಟಕ್ಕೂ ಮನರಂಜನೆಯ ಹಪಹಪಿಯಿಂದಾಗಿಯೇ ನೆಲ, ನೀರು, ಗಾಳಿಯನ್ನೆಲ್ಲ ಈ ದುಃಸ್ಥಿತಿಗೆ ತಂದಿದ್ದೇವೆ. ಇನ್ನೆಷ್ಟು ಕೃತಕ ರಂಜನೆ ಬೇಕು ನಮಗೆ?