ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ತಾಲ್ಲೂಕಿನ ಹಿಂಡಲಗಾ ಗ್ರಾಮದ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿರುವುದು ನಿಜವಾದರೂ ಅವುಗಳನ್ನು ಮಾಡಿಸಿದ್ದು ಯಾರೆಂಬುದು ತಿಳಿದಿಲ್ಲ ಎಂದು ಕೆಲವು ಗ್ರಾಮಸ್ಥರು ಹೇಳಿರುವುದು (ಪ್ರ.ವಾ., ಏ. 18) ವಿಚಿತ್ರವಾದರೂ ಗಮನಾರ್ಹ ಸುದ್ದಿ. ಸಾರ್ವಜನಿಕ ರಸ್ತೆ ಕಾಮಗಾರಿಗಳನ್ನು ಯಾರಾದರೂ ಮಾಡಬಹುದು, ಯಾರಾದರೂ ಕಾಮಗಾರಿ ಆದೇಶ ಕೊಡಬಹುದು, ಹೇಗಾದರೂ ಮಾಡಬಹುದು ಎನ್ನುವಂತಾಗಿದೆ.