ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ, ಪಿಂಚಣಿದಾರರಿಗೆ ತುಟ್ಟಿಭತ್ಯೆ ಹೆಚ್ಚಿಸಿರುವುದು ಸ್ವಾಗತಾರ್ಹ. ದೇಶದಲ್ಲಿ ಬಹಳಷ್ಟು ಹಿರಿಯ ನಾಗರಿಕರು ಸಾರ್ವಜನಿಕ, ಖಾಸಗಿ ಹಾಗೂ ಸ್ವಯಂಸೇವಾ ಸಂಸ್ಥೆಗಳಿಂದ ನಿವೃತ್ತಿ ಹೊಂದಿದ್ದು, ಪಿಂಚಣಿಗೆ ಅರ್ಹರಾಗಿಲ್ಲ. ಅವರು ತಮ್ಮ ಜೀವನಕ್ಕೆ ಅಂಚೆಕಚೇರಿ, ಬ್ಯಾಂಕ್ ಹಾಗೂ ಭಾರತೀಯ ಜೀವ ವಿಮಾ ನಿಗಮದ ಹಿರಿಯ ನಾಗರಿಕರ ಠೇವಣಿಯ ಬಡ್ಡಿಯನ್ನು ನಂಬಿದ್ದಾರೆ.