ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳು ಮುಂದಿನ ಭೀಕರತೆಯನ್ನು ತೋರಿಸುತ್ತಿವೆ. ಒಂದು ಪಕ್ಷದಿಂದ ಆರಿಸಿಬಂದ ಜನಪ್ರತಿನಿಧಿಯು ಪಕ್ಷನಿಷ್ಠೆ ಮರೆತು ಅಧಿಕಾರದಾಹಕ್ಕಾಗಿ ಇನ್ನೊಂದು ಪಕ್ಷಕ್ಕೆ ಹಾರುವುದನ್ನು ತಪ್ಪಿಸಬೇಕು. ಚುನಾವಣೆಗೆ ಮೊದಲು ಪಕ್ಷ ತೊರೆಯಲಿ, ಆದರೆ ಗೆದ್ದ ನಂತರ ತಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ ಜನರಿಗೆ, ಪಕ್ಷಕ್ಕೆ ನಂಬಿಕೆದ್ರೋಹ ಮಾಡುವುದು ಉಚಿತವಲ್ಲ.